ಡೆಡ್ಲಿ ಮುತ್ತಪ್ಪ ರೈ ಕಮ್ ಬ್ಯಾಕ್!

0
Spread the love

ವಿಜಯಸಾಕ್ಷಿ ಸಿನಿಮಾ ಸುದ್ದಿ, ಬೆಂಗಳೂರು:
ಭೂಗತಲೋಕದ ದೊರೆ ಡಾನ್ ಮುತ್ತಪ್ಪ ರೈ, 1960-80 ದಶಕದ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರೈ ಆಳಿದ ಅಂಡರ್‌ವರ್ಲ್ಡ್‌ನ್ನು ತೆರೆಗೆ‌ ತರುತ್ತಿದ್ದಾರೆ ಡೆಡ್ಲಿ ಡೈರೆಕ್ಟರ್.

Advertisement

ಎಂಆರ್ ಹೆಸರಿನ ಚಿತ್ರಕ್ಕೆ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಜರುಗಿತು. ನಿರ್ದೇಶಕ ರವಿಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬರುತ್ತಿರೊ ಈ ಚಿತ್ರದಲ್ಲಿ ಹೊಸ ಹುಡುಗ ದೀಕ್ಷಿತ್ ಎಂಆರ್ ಆಗಿ ಕಾಣಿಸಿಕೊಳ್ಳಲಿಸದ್ದಾರೆ.

ಈಗಾಗಲೇ ಎಂಆರ್ ಚಿತ್ರದ ಪೊಸ್ಟರ್ ಲಾಂಚ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನತ್ತ ಸಾಗಿವೆ.

ಡೆಡ್ಲಿ ಸೋಮ, ಮಾದೇಶ ಚಿತ್ರದ ಮೂಲಕ ಭೂಗತ ಲೋಕದ ಕಥೆ ಹೇಳಿದ್ದ ರವಿ ಶ್ರೀ ವತ್ಸ ಬಹಳ ವರ್ಷಗಳ ನಂತರ ಮತ್ತೊಮ್ಮೆ ಅಂಡರ್‌‌ವರ್ಲ್ಡ್ ಕಥೆ ಹೇಳಲು ಬರುತ್ತಿದ್ದಾರೆ.

ಈಗಾಗಲೇ ಚಿತ್ರದ ಶೂಟಿಂಗ್ ಷೆಡ್ಯೂಲ್ ರೆಡಿಯಾಗಿದ್ದು ಸದ್ಯದ ಮಾಹಿತಿ ಪ್ರಕಾರ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ನಡೆಯಲಿದೆ. ಕೆಲ ದೃಶ್ಯಗಳಿಗೆ ವಿದೇಶದ ಲೋಕೇಷನ್ ಅಗತ್ಯ ಇದರ. ಆದರೆ ಈಗ ಪರವಾನಗಿ ಸಿಗೋದು ಅನುಮಾನ ಇರೋದ್ರಿಂದ ಕೊನೆ ಷೆಡ್ಯೂಲ್‌ತನಕ ಕಾದು ನೋಡಬೇಕು ಅನ್ನುತ್ತೆ ಚಿತ್ರತಂಡ.

ಶಾಸಕ ಮುನಿರತ್ನ, ಡಿಸಿಪಿ ಅಶೋಕ್‌ಕುಮಾರ್, ನಿರ್ಮಾಪಕ ರಾಮು ಹಾಗೂ ನಿರ್ದೇಶಕ ಕೆ.ವಿ.ರಾಜು ಚಿತ್ರದ ಮುಹೂರ್ತದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮುತ್ತಪ್ಪ ರೈ ಕುರಿತ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here