ವಿಜಯಸಾಕ್ಷಿ ಸುದ್ದಿ ಧಾರವಾಡ: ಜಿಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಶ್ರೀಗಂಧ ಸಾಗಿಸುತ್ತಿದ್ದ ಐವರನ್ನು ಬಂಧಿಸಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಕಾರವಾರ, ಧಾರವಾಡ ಜಿಲ್ಲೆಗಳಲ್ಲಿನ ಗಂಧದ ತುಂಡುಗಳನ್ನು ಕಳ್ಳರು ಗೂಡ್ಸ್ ವಾಹನದಲ್ಲಿ ಸಾಗಾಣೆ ಮಾಡುತ್ತಿದ್ದರು.
![](http://vijayasakshi.com/wp-content/uploads/2021/01/img_20210107_449007118194029500118650.jpg)
ಬಂಧಿತ ಐವರೂ ಬೆಳಗಾವಿ ಮೂಲದವರಾಗಿದ್ದಾರೆ. ಬಂಧಿತರಿಂದ 400 ಕೆಜಿ ಶ್ರೀಗಂಧದ ವಶ
ಒಂದು ಗೂಡ್ಸ್ ವಾಹನ ಮತ್ತು ಶಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಒಟ್ಟು 70 ಲಕ್ಷವಾಗಿದೆ.