25.8 C
Gadag
Friday, June 9, 2023

ನಕ್ಕು ನಲಿದಾಡಿದ ಪೋಲಿಸರು: ಪೋಲಿಸರ ಮಾನಸಿಕ ಒತ್ತಡ ದೂರ ಮಾಡಿದ ಹೌದ್ದ ಹುಲಿಯಾ ನಾಟಕ

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಳೆದ ಹಲವಾರು ದಿನಗಳಿಂದ ಸತತವಾಗಿ ಬಂದೋಬಸ್ತಿನಲ್ಲಿದ್ದ ಇಡೀ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಕ್ಕು ನಲಿದಾಡಿದರು. ಅದಕ್ಕೆ ಕಾರಣವಾಗಿದ್ದು ಹೌದ್ದ ಹುಲಿಯಾ ನಾಟಕ.

ಕೊಪ್ಪಳದ ಬುಧವಾರ 50ನೇ ಪ್ರದರ್ಶನ ಪೂರ್ಣಗೊಂಡ ನಿಮಿತ್ತ ವಿಶೇಷ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಅಂದ್ರೆ ಈ ನಾಟಕದ ಪ್ರೇಕ್ಷಕರೆಲ್ಲರೂ ಪೋಲಿಸ್ ಇಲಾಖೆಯವರು. ಮಹಿಳಾ ಸಿಬ್ಬಂದಿ, ಟ್ರೇನಿಂಗ್ ನಲ್ಲಿರುವ ಪೋಲಿಸರು ಸೇರಿದಂತೆ ಅಂದಾಜು ನೂರಕ್ಕೂ ಹೆಚ್ಚು ಪೋಲಿಸರು ಇಂದು ಹೌದ್ದ ಹುಲಿಯಾ ನಾಟಕ ನೋಡಿ ನಕ್ಕು ನಕ್ಕು ಸುಸ್ತಾದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ ಇಡೀ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಕರೆತಂದು ನಾಟಕ ತೋರಿಸಿದರು. ಕರೋನಾ, ಚುನಾವಣೆ ಬಂದೋಬಸ್ತ್‌ನಿಂದ ಸತತವಾಗಿ ಒತ್ತಡದಲ್ಲಿ ಪೋಲಿಸರು ರಿಲ್ಯಾಕ್ಸ್ ಆದರು.

ನಾಟಕದ ಕೊನೆಯ ಸನ್ನಿವೇಶಕ್ಕೂ ಮೊದಲು ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಡಿಆರ್ ಡಿಎಸ್ಪಿ ಶಶಿಕಾಂತ, ಸಿಪಿಐಗಳಾದ ವಿಶ್ವನಾಥ ಹಿರೇಗೌಡರ, ಮಾರುತಿ ಗುಳ್ಳಾರಿ, ಮೌನೇಶ್ವರ ಮಾಲಿಪಾಟೀಲ್, ನಾಗಿರೆಡ್ಡಿ, ಸೇರಿದಂತೆ ಇತರ ಅಧಿಕಾರಿಗಳು ವೇದಿಕೆಯ ಮೇಲೆ ನಟ ನಟಿಯರನ್ನು ಆತ್ಮೀಯವಾಗಿ ಸನ್ಮಾನಿಸಿ , ಕಾಣಿಕೆ ನೀಡಿದರು.

ಇಡೀ ಸಿಬ್ಬಂದಿ ವರ್ಗ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರಿಗೆ ಸ್ವಲ್ಪಮಟ್ಟಿಗೆ ರಿಲೀಪ್ ಸಿಗಲಿ ಎನ್ನುವ ಕಾರಣಕ್ಕೆ ಇವತ್ತು ಈ ಪ್ರದರ್ಶನ ಆಯೋಜನೆ ಮಾಡಿದ್ದೇವೆ. ಕಲಾವಿದರಾದ ಭರತ್ ತಾಳಿಕೋಟೆಯವರ ತಂದೆ ರಾಜು ತಾಳಿಕೋಟೆಯವರು ಅತ್ಯುತ್ತಮ ಕಲಾವಿದರು. ಇಂತಹ ಕಲೆಗೆ ಯಾವತ್ತೂ ಪ್ರೋತ್ಸಾಹ ನೀಡುತ್ತೇವೆ ಎಂದು ಡಿಎಸ್ಪಿ ವೆಂಕಟಪ್ಪ ನಾಯಕ ಹೇಳಿದರು.

ನಾಟಕ ನೋಡಲು ಪಿಎಸ್ಐ‌ಗಳಾದ ನಾಗರಾಜ ಮೇಕಾ, ಅಮರೇಶ ಹುಬ್ಬಳ್ಳಿ, ವೆಂಕಟೇಶ ,ಚಂದ್ರಪ್ಪ, ಬಸವರಾಜ್, ಸುಪ್ರಿತ್,ಹನುಮಂತ ತಳವಾರ ಸೇರಿದಂತೆ ಇತರ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts