27.3 C
Gadag
Wednesday, June 7, 2023

ನಿವೃತ್ತ ಪೊಲೀಸ್ ಅಧಿಕಾರಿಯ ಬ್ಯಾಗಿನಲ್ಲಿದ್ದ ಹಣ ಕದ್ದ ಖದೀಮರು

Spread the love

ವಿಜಯಸಾಕ್ಷಿ ಸುದ್ದಿ, ಗದಗ

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬ್ಯಾಗಿನಲ್ಲಿದ್ದ ಹಣ, ಎರಡು ಬ್ಯಾಂಕ್ ಪಾಸ್ ಬುಕ್, ಐಡಿ ಕಾರ್ಡ್ ದೋಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ನರಗುಂದ ಬಸ್ ನಿಲ್ದಾಣದಲ್ಲಿ ನಡೆದಿದೆ.

ರಾಮದುರ್ಗ ತಾಲ್ಲೂಕಿನ ತೋರಣಗಟ್ಟಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದಲಿಂಗಪ್ಪ ದೊಡ್ಡಸಿದ್ದಪ್ಪ ಇಮಡಿ ಎಂಬುವವರು ಬ್ಯಾಗ್ ನಲ್ಲಿದ್ದ ನಗದು ಕಳೆದುಕೊಂಡಿದ್ದಾರೆ.

ಸಿದ್ದಲಿಂಗಪ್ಪ ತಮ್ಮೂರು ತೋರಣಗಟ್ಟಿಗೆ ಹೋಗಲು ನರಗುಂದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ನರಗುಂದ-ಮುನವಳ್ಳಿ ಬಸ್ ಹತ್ತುತ್ತಿದ್ದಾಗ ಎಡಗಡೆ ಹೆಗಲಿಗೆ ಹಾಕಿದ್ದ ಬ್ಯಾಗಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ.

ಬ್ಯಾಗಿನಲ್ಲಿದ್ದ 21 ಸಾವಿರ ರೂ. ನಗದು, ವಿಜಯಾ ಹಾಗೂ ಕೆವ್ಹಿಜಿ ಬ್ಯಾಂಕ್ ಪಾಸ್ ಬುಕ್, ಓಟರ್ ಐಡಿ, ಪಾನ್ ಕಾರ್ಡ್ ಕಳ್ಳತನವಾಗಿವೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Posts