ಪಿಎಂ-ಕೇರ್ಸ್ ನಿಧಿಗೆ ನವೋದಯ ಶಾಲೆ ಕೋಟಾದಲ್ಲಿ ನೀಡಿದ್ದು ದೇಣಿಗೆಯೋ, ವಸೂಲಿಯೋ?

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸಾವಿರಾರು ಕೋಟಿ ರೂ.ಗಳನ್ನು ಪಿಎಂ-ಕೇರ‍್ಸ್ ನಿಧಿಗೆ ದೇಣಿಗೆ ನೀಡಿದ್ದು ಈಗ ಹಳೆಯ ವಿಷಯ. ಈಗ ಆರ್‌ಟಿಐ ಮೂಲಕ ಹೊರ ಬಂದ ಹೊಸ ಸತ್ಯ ಏನೆಂದರೆ ದೇಶದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಹಳ್ಳಿ ಮಕ್ಕಳಿಗಾಗಿ ಇರುವ ನವೋದಯ ಶಾಲೆಗಳು ಪಿಎಂ-ಕೇರ‍್ಸ್ಗೆ 21.81 ಕೋಟಿ ರೂ. ದೇಣಿಗೆ ನೀಡಿವೆ.

ಇದು ದೇಣಿಗೆಯೋ ಅಥವಾ ಅಧಿಕಾರ ಬಳಸಿ ಒತ್ತಾಯದಿಂದ ನಡೆಸಿದ ವಸೂಲಿಯೋ ಎಂಬ ಪ್ರಶ್ನೆ ಎದ್ದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ಹಿಂದೆ ಆಗಸ್ಟ್ 19ರಂದು ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಪ್ರಕಾರ, 38 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು 2,105 ಕೋಟಿ ರೂ. ದೇಣಿಗೆ ನೀಡಿವೆ. ಸಾಮಾಜಿಕ ಜವಾಬ್ದಾರಿ ನಿಧಿಯ ಹಣವನ್ನು ಈ ಕಂಪನಿಗಳು ಪಿಎಂ-ಕೇರ‍್ಸ್ಗೆ ನೀಡಿದ್ದವು. ಈ ಕಂಪನಿಗಳಿಗೂ ದೇಣಿಗೆ ನೀಡಲೇಬೇಕೆಂಬ ಮೌಖಿಕ ಆದೇಶವಿತ್ತು ಎನ್ನಲಾಗಿದೆ.

ಪಿಎಂ-ಕೇರ‍್ಸ್ ನಿಧಿಯ ವಿವರಗಳನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತ ಬಂದಿದೆ. ಹೀಗಾಗಿ ಸ್ವತ: ಇಂಡಿಯನ್ ಎಕ್ಸ್ ಪ್ರೆಸ್ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಆರ್‌ಟಿಐ ಸಲ್ಲಿಸಿ ಈ ಮಾಹಿತಿ ಪಡೆದಿತ್ತು. ಈಗ ನವೋದಯ ಸೇರಿದಂತೆ ಇತರ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ಈ ಸಂಸ್ಥೆಗಳಿಂದ 21.81 ಕೋಟಿ. ರೂ ದೇಣಿಗೆ ಹರಿದು ಬಂದಿದೆ.

ಯಾವುದೇ ನಿಧಿ ಇರಲಿ, ಅದಕ್ಕೆ ಸ್ವ ಇಚ್ಛೆಯಿಂದ ಬಂದ ದೇಣಿಗೆ ಮಾತ್ರ ಸ್ವೀಕರಿಸಬೇಕು. ಆದರೆ ಸಾರ್ವಜನಿಕರಿಗೇ ಸೇರಿದ ಕಂಪನಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ದೇಣಿಗೆ ಪಡೆಯುವುದು ವಿಚಿತ್ರವಾಗಿದೆ ಅಲ್ಲವೆ?


Spread the love

LEAVE A REPLY

Please enter your comment!
Please enter your name here