34.4 C
Gadag
Tuesday, March 28, 2023

ಪೊಲೀಸರ ಕಾರ್ಯಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಬಂಧನ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣದ ನಿವಾಸಿಗಳಾದ ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವೀರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಟಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರಿಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಬಂಧಿತ ಆರೋಪಿಗಳಿಂದ 500 ಗ್ರಾಂ ಗಾಂಜಾ ಹಾಗೂ 3 ಕೆ.ಜಿ ಹಸಿ ಗಾಂಜಾ ಮತ್ತು ಎರಡು ಬೈಕ್ ಸಹಿತ 2 ಲಕ್ಷ 85 ಸಾವಿರ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಪಿಎಸ್ಐ ಗುರುಶಾಂತ ದಾಶ್ಯಾಳ, ಸಿಬ್ಬಂದಿಗಳಾದ ಮಹೇಶ ಬಳ್ಳಾರಿ, ಸುರೇಶ ಮಂತಾ, ಹೆಚ್.ಎಲ್. ಭಜಂತ್ರಿ, ಸಂಗಮೇಶ ಹಲಬಾಗಿಲ, ಎಂ.ಎಚ್.ಅವಾರಿ, ಶ್ರೀಕಾಂತ ಜಂಗಣ್ಣವರ, ಎಸ್.ಎಸ್.ಭಜಂತ್ರಿ, ಚಂದ್ರು ಹಾದಿಮನಿ, ಜೆ.ಬಿ.ಪೂಜಾರ, ವಿರೇಶ ಪಾಟೀಲ ಇದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,749FollowersFollow
0SubscribersSubscribe
- Advertisement -spot_img

Latest Posts

error: Content is protected !!