ಬದಲಾವಣೆಗಾಗಿ ಕುಬೇರಪ್ಪಗೆ ಮತ ನೀಡಿ: ಕಲ್ಮನಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಬದಲಾವಣೆಗಾಗಿ ಪದವೀಧರರೆಲ್ಲರ ಮತ್ತು ಶಿಕ್ಷಕರ ಚಿತ್ತ ಕುಬೇರಪ್ಪನವರತ್ತ ಬಂದಿದೆ ಎಂದು ಡಾ.ಆರ್.ಎಂ. ಕುಬೇರಪ್ಪನವರ ಅಭಿಮಾನಿ ಬಳಗದ ಯುವ ಮುಖಂಡ ಪ್ರೊ.ಹನುಮಂತಗೌಡ ಆರ್.ಕಲ್ಮನಿ ಅಭಿಪ್ರಾಯಪಟ್ಟರು.
ಅವರು ಗದಗ ಬೆಟಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ, ಡಾ. ಕುಬೇರಪ್ಪನವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಗೆಲ್ಲಿಸಬೇಕೆಂದು ಮಹಾವಿದ್ಯಾಲಯದ ಪ್ರಾಚಾರ್ಯರಲ್ಲಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಲ್ಲಿ ಮನವಿ ಮಾಡಿದ ನಂತರ ಮಾತನಾಡಿದರು.
ಕಂಪ್ಯೂಟರ್ ಯುಗದಲ್ಲಿರುವ ಭಾರತದ ಶೈಕ್ಷಣಿಕ ವ್ಯವಸ್ಥೆ ಸಮೃದ್ಧವಾದ ಮಾನವ ಸಂಪನ್ಮೂಲ ಹೊಂದಿದೆ. ಆದರೆ ದಿನ ಕಳೆದಂತೆ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ, ಪದವಿ ಪಡೆದವರ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲಯೆಂಬ ಅವರ ಬದುಕಿನ ಗೋಳು ನಿತ್ಯ ನಿರಂತರವಾಗಿ ಕೇಳಿ ಬರುತ್ತಿದೆ.
ರಾಜ್ಯದ ಪದವೀಧರರ ಮತ್ತು ಶಿಕ್ಷಕರ ಮತ ಕ್ಷೇತ್ರದಿಂದ ಸ್ಪರ್ಧಿಸಿ ಕೇಲವು ಜನಪ್ರತಿನಿಧಿಗಳಾಗಿರುವವರು ಇದನ್ನು ಕೇಳಿ ಕೇಳದಂತೆ ಜಾಣ ಕುರುಡುತನದಂತೆ ವರ್ತಿಸುತ್ತಿದ್ದಾರೆ. ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಕುಬೇರಪ್ಪ ಅವರಿಗೆ ಮತ ನೀಡಿ ಎಂದು ಕಲ್ಮನಿ ಮನವಿ ಮಾಡಿದರು.
ಈ ವೇಳೆ ಸಿದ್ದಪ್ಪ ಈರಗಾರ, ಕೆ.ಜಿ. ಬೆಂತೂರ, ಸಿ.ಎಂ. ಕಾಳನ್ನವರ, ವೈ.ಬಿ. ಹಿರೇಮಠ, ಡಿ.ಎಂ. ಪಾಟೀಲ, ಎಂ.ಎಫ್. ಹೊಂಬಳ, ಶಿವು ಬಾಗಳಿ, ಶಿವಾನಂದ ಕುರಿ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
 


Spread the love

LEAVE A REPLY

Please enter your comment!
Please enter your name here