ಬಸ್ ಚಾಲಕನ ಹುಚ್ಚು ಸಾಹಸ; ಪ್ರಯಾಣಿಕರ ಪರದಾಟ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಧಾರವಾಡ: ಬಸ್ ಚಾಲಕನ ಹುಚ್ಚು ಸಾಹಸಕ್ಕೆ ಪ್ರಯಾಣಿಕರು ಪರದಾಡಿದ ಘಟನೆ ಜಿಲ್ಲೆಯ ಇನಾಮಹೊಂಗಲ, ಮತ್ತು ಹಾರೊಬೆಳವಡಿ ಗ್ರಾಮದ ಮಧ್ಯದಲ್ಲಿ ನಡೆದಿದೆ.

ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಈ ಗ್ರಾಮಗಳ ಮಧ್ಯದಲ್ಲಿ ಹರಿಯುವ ಹಳ್ಳ ರಭಸವಾಗಿ ಸೇತುವೆ ಮೇಲೆ ಹರಿಯುತ್ತಿತ್ತು. ಈ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ ಸೇತುವೆ ಮೇಲೆ ಬಂದಾಗ ಸಿಲುಕಿಕೊಂಡಿದೆ.

ಆದರೆ ಧೃತಿಗೆಡದೇ ಬಸ್ ಚಾಲಕ ಧೈರ್ಯದಿಂದ ಆ ಸೇತುವೆಯ ಮೇಲೆಯೇ ಬಸ್ ಓಡಿಸಿ ಪಾರು ಮಾಡಿದ್ದಾನೆ.

ಈ ವೇಳೆ ಸ್ಥಳೀಯರು ಭಯದಿಂದ‌ ಬಸ್ ಪಾರಾಗುತ್ತದೋ ಇಲ್ಲವೋ ಎನ್ನುವುದನ್ನು ತೆರೆದ ಕಣ್ಣಿನಲ್ಲಿ ನೋಡುತ್ತಾ ನಿಂತಿದ್ದರು.

ಯಾವುದೇ ಅನಾಹುತವಾಗದೇ ಬಸ್ ಪಾರಾಗಿದ್ದನ್ನು ಕಂಡು ಕೊನೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ನಿಟ್ಟುಸಿರುಬಿಟ್ಟರು.


Spread the love

LEAVE A REPLY

Please enter your comment!
Please enter your name here