HomeGadag Newsಬಿಜೆಪಿಯಿಂದ ಜನರಿಗೆ ಮಾರಕ ಮಸೂದೆಗಳ ಜಾರಿ

ಬಿಜೆಪಿಯಿಂದ ಜನರಿಗೆ ಮಾರಕ ಮಸೂದೆಗಳ ಜಾರಿ

Spread the love

ವಿಜಯಸಾಕ್ಷಿ ಸುದ್ದಿ ನರಗುಂದ
ಬಿಜೆಪಿ ಜಾರಿಗೆ ತಂದಿರುವ ಮೂರು ಮಸೂದೆಗಳನ್ನು ವಿರೋಧಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಘಟಕದಿಂಧ ರೈತರು ಹಾಗೂ ಸಾರ್ವಜನಿಕರಿಗಾಗಿ ಸಹಿ ಸಂಗ್ರಹಣಾ ಅಭಿಯಾನವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಆರ್. ಯಾವಗಲ್, ಗಾಂಧಿ ಮತ್ತು ಇತರ ಗಣ್ಯರ ಆದರ್ಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸುಮಾರು 70 ವರ್ಷಗಳ ಕಾಲ ಈ ದೇಶದಲ್ಲಿ ಆಡಳಿತ ನಡೆಸಿ ರೈತರ ಮತ್ತು ದೀನ ದಲಿತರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಪಟ್ಟಿದೆ. ಆದರೆ, ಈಗಿನ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಭೂ ಮಸೂದೆ ಹಾಗೂ ಕಾರ್ಮಿಕ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಮೂರು ಮಸೂದೆಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿವೆ ಎಂದು ಸಾರ್ವಜನಿಕರಿಂದಲೇ ಸಹಿ ಮಾಡಿಸಿ ಕೆಪಿಸಿಸಿಗೆ ಕಳುಹಿಸಿ ಕೊಡಲಾಗುವುದು. ನಂತರ ಕೆಪಿಸಿಸಿಯಿಂದ ಎಐಸಿಸಿಗೆ ಮಾಹಿತಿ ರವಾನೆಗೊಂಡ ನಂತರ ರಾಷ್ಟ್ರಪತಿಗೆ ಸಂಪೂರ್ಣ ವರದಿ ನೀಡಲಾಗುವುದು. ಇದು ರಾಜ್ಯದೆಲ್ಲೆಡೆ ರುಜು ಅಭಿಯಾನ ಸದ್ಯ ಚಾಲನೆಯಲ್ಲಿದೆ. ಅ.31ರವರೆಗೆ ಸಾರ್ವಜನಿಕರಿಂದ ಸಹಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಹೊಳೆಆಲೂರ ಮಂಡಳದ ಅಧ್ಯಕ್ಷ ಮಲ್ಲಣ್ಣ ಕೊಳೇರಿ ಮಾತನಾಡಿ, ರೈತರಿಗೆ ಅತೀ ಮಹತ್ವವಾಗಿರುವ ಮೂರು ಮಸೂದೆಗಳ ವಿಧೇಯಕವನ್ನು ತಿದ್ದುಪಡಿ ಮಾಡಿ ರೈತರನ್ನು ಆಕ್ಟೋಪಸ್‌ನಂತೆ ಸೆಳೆದು ತೊಂದರೆನೀಡುವ ಬಿಜೆಪಿ ಸರ್ಕಾರದ ಆಡಳಿತದಿಂದ ರೈತರು ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಫಕ್ರುದ್ದೀನ್ ಚಿಕ್ಕಮಣ್ಣೂರ, ವಿಜಯಕುಮಾರ ತೋಟರ, ವಿ.ಎನ್. ಕೊಳ್ಳಿಯವರ, ಎಸ್.ಡಿ. ಕೊಳ್ಳಿಯವರ, ಪ್ರವೀಣ ಯಾವಲ್, ವಿವೇಕ ಯಾವಗಲ್, ಪ್ರಕಾಶಗೌಡ ತಿರಕನಗೌಡ್ರ, ರಾಮಕೃಷ್ಣ ಗೊಂಬೆ, ದ್ಯಾಮಣ್ಣ ಕಾಡಪ್ಪನವರ, ವಿಠಲ ಶಿಂಧೆ, ರಾಘವೇಂದ್ರ ನಲವಡೆ, ಉಮಾ ದ್ಯಾವನೂರ, ಕೃಷ್ಣಪ್ಪ ಜೋಗಣ್ಣವರ ಮತ್ತಿತರರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!