ಬೀದಿ ವ್ಯಾಪಾರಸ್ಥರ ಒಕ್ಕಲೆಬ್ಬಿಸದಂತೆ ಮನವಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರದ ಬೀದಿ ವ್ಯಾಪಾರಸ್ಥರನ್ನು ತಹಸೀಲ್ದಾರರರು ಹಾಗೂ ಪುರಸಭೆ ಅಧಿಕಾರಿಗಳು ಏಕಾಶಕಿ ಒಕ್ಕಲೆಬ್ಬಿಸಿದ್ದನ್ನು ಖಂಡಿಸಿ, ಶುಕ್ರವಾರ ಪಟ್ಟಣದಲ್ಲಿ ಬೀದಿ ವ್ಯಾಪಾರವನ್ನು ಸಂಪೂರ್ಣ ಬಂದ್ ಮಾಡಲಾಯಿತು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗದಗ ಜಿಲ್ಲಾ ಬೀದಿ ಬೀದಿ ವ್ಯಪಾರಸ್ಥ ಸಂಘದ ಸದಸ್ಯರು, ಕೋವಿಡ್ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ನೀಡಿ, ಸರಕಾರಿ ಮಟ್ಟದಲ್ಲಿ ಸಮಿತಿ ರಚಿಸುವಂತೆ ಆದೇಶವಿದ್ದರೂ ಆರು ವರ್ಷಗಳಿಂದ ಪಾಲನೆಯಾಗಿಲ್ಲ. ಹೀಗಾಗಿ, ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮುಕ್ತ ವ್ಯವಸ್ಥೆ ಕಲ್ಪಿಸುವಂತೆ ವಿನಂತಿ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮುಕ್ತುಂಸಾಬ ಸಾಲಬಂದ, ಕಾರ್ಯದರ್ಶಿ ಬಾಷಾಸಾಬ ಮಲ್ಲಸಮುದ್ರ, ಮಾರುತಿ ಸೋಲಂಕಿ, ರಶೀದ ನದಾಫ, ರೇಣುಕಾ ಹತ್ತಿವಾಲೆ, ಫಯಾಜ್ ನಾರಾಯಣಕೇರಿ, ಯೂಸುಫ್ ಶಿರಹಟ್ಟಿ, ಮಹಮ್ಮದ ಅಲಿ ಅತ್ತರ, ರಾಜು ರೋಣದ, ಶೌಕತ್ ಕಾತರಕಿ, ಶಿವು, ದಾದಾಫೀರ ಮುಂಡರಗಿ, ನವೀನ ಎನ್. ಭಂಡಾರಿ, ಸಂಘದ ಪದಾಧಿಕಾರಿಗಳು ಉಪಸ್ಥತರಿದ್ದರು.


Spread the love

LEAVE A REPLY

Please enter your comment!
Please enter your name here