26.1 C
Gadag
Wednesday, October 4, 2023

ಬೈಕ್ ಸವಾರನನ್ನು ಬೂಟಿನಿಂದ ಒದ್ದ ಸಿಪಿಐ!

Spread the love

ವಿಜಯಸಾಕ್ಷಿ ಸುದ್ದಿ, ತುಮಕೂರು: ಬೈಕ್ ಸವಾರನನ್ನು ರಸ್ತೆಯಲ್ಲಿಯೇ ಬೂಟುಕಾಲಿನಿಂದ ಒದೆಯುವ ಮೂಲಕ ಸಿಪಿಐ ಒಬ್ಬರು ತಮ್ಮ ಅಧಿಕಾರದ ದರ್ಪ ತೋರಿಸಿರುವ ಘಟನೆ ನಡೆದಿದೆ.

ಜಿಲ್ಲೆಯ ಮಧುಗಿರಿ ಸಿಪಿಐ ಸರ್ದಾರ್ ಅವರೇ ಈ ಘನಾಂಧಾರಿ ಕೆಲಸ ಮಾಡಿದ್ದು, ನಡುರಸ್ತೆಯಲ್ಲೇ ಬೈಕ್ ಸವಾರನನ್ನು ಬೂಟು ಕಾಲಿನಿಂದ ಒದ್ದಿದ್ದಾರೆ. ಮಧುಗಿರಿ ಪಟ್ಟಣದ ನೃಪತುಂಗಾ ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ಸಿಪಿಐ ಸರ್ದಾರ್ ವಾಹನ ತಪಾಸಣೆ ನಡೆಸಿ ದಂಡ ಹಾಕುತ್ತಿದ್ದರು.

ಸಿಪಿಐ ಸರ್ದಾರ್

ಈ ವೇಳೆ ಬೈಕ್ ಸವಾರನೊಬ್ಬ ದಂಡ ಕಟ್ಟಡೇ ತಡ ಮಾಡಿದ್ದಕ್ಕೆ ಅತನಿಗೆ ಸಿಪಿಐ ಸರ್ದಾರ್ ಕಾಲಿನಿಂದ ಒದ್ದಿದ್ದಾರೆ. ಈ ವೇಲೆ ಸವಾರನು ನೆಲಕ್ಕೆ ಹಾರಿಬಿದ್ದಿದ್ದಾನೆ. ಆಗಲೂ ಸುಮ್ಮನೆ ಬಿಡಿದ ಸಿಪಿಐ ಸರ್ದಾರ್ ಅವಾಚ್ಯವಾಗಿ ನಿಂದಿಸಿದ್ದಾರೆ.

ಸಿಪಿಐ ದರ್ಪದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಿಪಿಐ ಅಬ್ಬರಕ್ಕೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸಿಪಿಐ ಸರ್ದಾರ್ ವರ್ತನೆಯಿಂದ ಬೇಸತ್ತ ಮಧುಗಿರಿ ಸಾರ್ವಜನಿಕರು, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!