25.2 C
Gadag
Sunday, December 3, 2023

ಭೀಮ್ ಆರ್ಮಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳಿಗೆ ಸನ್ಮಾನ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಭೀಮ್ ಆರ್ಮಿ ಗದಗ ಜಿಲ್ಲಾಧ್ಯಕ್ಷರಾದ ನಾಗರಾಜ ಕಾಳೆ ಮತ್ತು ಭೀಮ್ ಆರ್ಮಿಯ ಪದಾಧಿಕಾರಿಗಳನ್ನ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ ಮಾತನಾಡಿ ಅಂಬೇಡ್ಕರವರ ತತ್ವ ಸಿದ್ಧಾಂತಗಳ ಮೇಲೆ ಕಾರ್ಯನಿರ್ವಹಿಸಿ ಹಾಗೂ ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಬಡವರಿಗೆ ಅನ್ಯಾಯವಾದರೆ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಸಂಗಾಪೂರ, ಮಾದಿಗ ಸಮಾಜದ ಹಿರಿಯರಾದ ಸುರೇಶ ಹೊಸಮನಿ, ಅಶೋಕ ಹಾದಿಮನಿ, ಆಟೋ ಮಾಲಕರ ವ ಚಾಲಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಎಂ. ಕಲ್ಮನಿ, ಉಪಾಧ್ಯಕ್ಷ ಮಂಜುನಾಥ ಅಗಸಿಮನಿ, ಜೈ ಭೀಮ ಸೇನಾ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ, ಮಾದಿಗ ಸಮಾಜದ ಹಿರಿಯರಾದ ಉಡಚಪ್ಪ ಹಳ್ಳಿಕೇರಿ, ವಿನಾಯಕ ವೈ. ಪರಾಪೂರ, ನಿಂಗಪ್ಪ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ವಿಶಾಲ ಗೋಶಲ್ಯನವರ, ಖಜಾಂಚಿ ವಿರುಪಾಕ್ಷಿ ಗೌಡರ, ಸಹ-ಕಾರ್ಯದರ್ಶಿ ಶ್ರೀಧರ ಜಕ್ಕಲಿ, ಭೀಮ ಆರ್ಮಿ ಜಿಲ್ಲಾ ಕಾರ್ಯದರ್ಶಿ ಆಕಾಶ ಕೋಣಿಮನಿ, ಮಂಜುನಾಥ ವೈ. ಪರಾಪೂರ, ಮಲ್ಲು ಪೂಜಾರ, ಪರಸಪ್ಪ ಹುಣಸೀಮರದ, ದೇವಿಂದ್ರಪ್ಪ ಗೊಣೆಮ್ಮನವರ, ಮಲ್ಲಪ್ಪ ಸತ್ಯಪ್ಪ ಪೂಜಾರ, ದವಲಪ್ಪ ನಡಿಗೇರ, ರಮೇಶ ರಾಲದೊಡ್ಡಿ, ವಿಜಯ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts