ಮಂಜುಳಾ ಪೂಜಾರಿ ಕೃಷಿ ಸಚಿವರ ಕ್ಷಮೆ ಕೇಳಲಿ: ಕಕ್ಕರಗೋಳ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕೊಪ್ಪಳ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿಕರ ಪ್ರತಿಭಟನೆಯಲ್ಲಿ ರೈತಮಹಿಳೆ ಮಂಜುಳಾ ಪೂಜಾರಿಯವರು ಮಾಧ್ಯಮದವರೊಂದಿಗೆ ಮಾತನಾಡುವ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಬಗ್ಗೆ ಅವಹೇಳನಕಾರಿ‌ ಪದ ಬಳಸಿರುವುದು ಸರಿಯಲ್ಲ.

ಕೂಡಲೇ ಮಂಜುಳಾ ಅವರು ಸಚಿವ ಬಿ.ಸಿ. ಪಾಟೀಲ ಅವರ ಕ್ಷಮೆ ಕೇಳಬೇಕು ಎಂದು ಬಿ.ಸಿ.ಪಾಟೀಲ ಅಭಿಮಾನಿ ಬಳಗದ ಮುಖಂಡ ಬಸನಗೌಡ ಕಕ್ಕರಗೋಳ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಚಿವ ಬಿ.ಸಿ.ಪಾಟೀಲ ಅವರು ರಾಜ್ಯದ ರೈತರ ಅಭಿವೃದ್ಧಿ ಕುರಿತು ಅಗಾಧ ಕನಸು‌ ಕಂಡಿದ್ದಾರೆ. ಕೃಷಿಪರ ಇರುವ ಸಚಿವರ ಉತ್ಸಾಹಕ್ಕೆ ತಣ್ಣೀರೆರಚುವಂಥ, ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಪದ ಬಳಸಿರುವುದು ವಿವೇಚನಾರಹಿತರು ಮಾಡುವ ಕೆಲಸ.

ಕೂಡಲೇ ಮಂಜುಳಾ ಪೂಜಾರಿಯವರು ಸಚಿವ ಬಿ.ಸಿ. ಪಾಟೀಲ ಬಳಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿ.ಸಿ.ಪಾಟೀಲ ಅಭಿಮಾನಿ ಬಳಗ ಪ್ರತಿಭಟನೆಗೆ ಮುಂದಾಗುತ್ತದೆ ಎಂದು ಎಚ್ಚರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here