27.3 C
Gadag
Wednesday, June 7, 2023

ಮಹಾಮಂಡಳದ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ ನೇಮಕ

Spread the love

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ನವಲಗುಂದ ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ ನೇಮಕ ನೇಮಕಾಗೊಂಡಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಆದೇಶ ಪ್ರತಿಯೊಂದನ್ನು ನೀಡಿ ಸನ್ಮಾನಿಸಿ ಮಾತನಾಡಿದ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್, ಸಧ್ಯದ ದಿನಮಾನದಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ಹಾಗೂ ಸಂಘಟನೆ ಅನಿವಾರ್ಯ ಆಗಿರುವುದು ತಮಗೆ ತಿಳಿದ ವಿಷಯ.

ಪಿಂಜಾರ್ ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಟನೆಯ ಮೂಲಕ ಘನ ಸರ್ಕಾರದ ಗಮನ ಸೆಳೆಯುವುದು ಅವಶ್ಯಕ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಸಮಾಜದ ಯುವ ಹೋರಾಟಗಾರ ಸಯ್ಯದ್ ನದಾಫ ಇವರು ತಮ್ಮ ಕ್ರಿಯಾಶೀಲತೆ ಮತ್ತು ಸಂಘಟನೆಗೆ ತಮ್ಮ ಕಾರ್ಯ ವೈಖರಿ ಹಾಗೂ ಸಮರ್ಪಣಾ ಭಾವನೆಯನ್ನು ಗೌರವಿಸಿ ತಮ್ಮನ್ನು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ನವಲಗುಂದ ತಾಲೂಕು ಕಾರ್ಯಾಧ್ಯಕ್ಷರಾಗಿ ಸಯ್ಯದ್ ನದಾಫ
ಇವರ ನೇಮಕ ಬಹಳ ಸಂತೋಷ ವೆನಿಸುತ್ತದೆ ಎಂದು ಹೇಳಿದರು.

ತಮ್ಮ ಆಯ್ಕೆಯ ಉದ್ದೇಶ ಸಮುದಾಯದ ಸಂಘಟನೆ ಹಿನ್ನೆಲೆ, ಹೋರಾಟ, ಸಂಘಟನ ಚಾತುರ್ಯ ಹಾಗೂ ನಾನಾ ಜವಾಬ್ದಾರಿ ನಿರ್ವಹಣೆ ಮೂಲಕ ಈಗಾಗಲೇ ತಾಲ್ಲೂಕಿನಲ್ಲಿ ಗುರುತಿಸಿಕೊಂಡವರು ಎಂದು ಡಾ. ಅಬ್ದುಲ್ ರಜಾಕ್ ಹೇಳಿದರು.

ಇನ್ನೂ ಮಹಾಮಂಡಳದ ಕಾರ್ಯಾಧ್ಯಕ್ಷರಾಗಿ ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿದ ಸಯ್ಯದ್ ನದಾಫ್, ಹೋರಾಟದ ಜೊತೆ ತಾಲ್ಲೂಕಿನಲ್ಲಿ ಸಂಘಟನೆಗೆ ಒತ್ತು ನೀಡಲಾಗುವುದು, ಅಷ್ಟೇ ಅಲ್ಲ ಈ ತಾಲೂಕು ಕಾರ್ಯಧ್ಯಕ್ಷ ಹುದ್ದೆ ಸಂಘಟನ ಕಾರ್ಯಕ್ಕೆ ವರದಂತೆ ಹೌದು. ಹಾಗಾಗಿ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಹೋರಾಟದ ಚಟುವಟಿಕೆಗಳೊಂದಿಗೆ ಸಂಘಟನೆಗೆ ಒತ್ತು ನೀಡುವ ಹೊಣೆಗಾರಿಕೆ ಹೆಚ್ಚಾಗಿರುತ್ತದೆ.
ಎಂದರು.

ಸಮುದಾಯದ ಸಂಘಟನೆ ಮಹಾಮಂಡಳದ ಸಿದ್ಧಾಂತ ಪ್ರತಿ ಪಾದಿಸಿ ಯುವಜನತೆ ಸೇರಿದಂತೆ ತಳಮಟ್ಟದಿಂದ ಸಮುದಾಯವನ್ನು ಕಟ್ಟಿ ಗಟ್ಟಿಗೊಳಿಸಿ ಸಂಘಟನೆ ಬಲಪಡಿಸುತ್ತೇನೇ ಎಂದು ಸಯ್ಯದ್ ಹೇಳಿದರು.

ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಖಾದರಸಾಬ್ ನದಾಫ್, ಪೀರಸಾಬ್ ನದಾಫ್, ನಬಿಸಾಬ ನದಾಫ್, ರಾಜು ನದಾಫ್, ಬಸನಗೌಡ ಪಾಟೀಲ್, ರಾಜು ಕೊಣ್ಣೂರ್ ಹಾಗೂ ಸಮುದಾಯದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Posts