ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಸಿ: ಹುಕ್ಕೇರಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಕೊರೊನಾ ಬಹಳಷ್ಟು ಅಪಾಯಕಾರಿಯಾಗಿ ಕಂಡುಬಂದಿದ್ದು, ಇದರ ನಿಯಂತ್ರಣಕ್ಕಾಗಿ ಎಲ್ಲರೂ ಮಾಸ್ಕಗಳನ್ನು ಹಾಗೂ ಸ್ಯಾನಿಟೈಸರ್ ಉಪಯೋಗಿಸುವುದನ್ನು ಕಡ್ಡಾಯವಾಗಿ ಮುಂದುವರೆಸಿ ಆರೋಗ್ಯ ಕಾಪಾಡಿಕೊಳ್ಳಲು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಲ್.ಎಸ್. ಹುಕ್ಕೇರಿ ತಿಳಿಸಿದರು.
ನರಗುಂದ ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ, ಆರೋಗ್ಯ ಇಲಾಖೆ ಹಾಗೂ ಕಾನೂನು ನೆರವು ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ವತಿಯಿಂದ ಅ. 17ರಂದು ಕೊರೊನಾ ತಡೆಗಟ್ಟಲು ಹಾಕಿಕೊಂಡ ಜನಜಾಗೃತಿ ಅಭಿಯಾನ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಮೇಶ ನಾಯ್ಕರ್, ಸಿಪಿಐ ಡಿ.ಬಿ. ಪಾಟೀಲ, ಎಎಸ್‌ಐ ವಿ.ಜಿ. ಪವಾರ, ಎಸ್.ಆರ್. ರಾಯನಗೌಡ್ರ, ಎಂ.ವಿ. ಮೂಲಿಮನಿ, ಎಂ.ಆರ್. ಕುಲಕರ್ಣಿ, ಜಿ.ವಿ. ಕೊಣ್ಣೂರ, ಸಿ.ಎಸ್. ಪಾಟೀಲ, ಎಂ.ಎಚ್. ತಹಸೀಲ್ದಾರ, ಎಂ.ಆರ್. ಕುಲಕರ್ಣಿ, ಕೆ.ಎಸ್. ಹೂಲಿ, ಆರ್.ಟಿ. ಪಾಟೀಲ, ಎಸ್.ಎಂ. ಗುಗ್ಗರಿ, ಆನಂದ ಭೋಸಲೆ, ಎಸ್.ಎಂ. ಜಲಗೇರಿ, ನಿಂಗಪ್ಪ ಚಂದ್ರ, ಅಭಿಷೇಕ ಹಡಪದ, ಆನಂದ ಹೂಗಾರ, ಎಸ್.ಟಿ. ಗಣಿ, ಎ.ಆರ್. ತಳವಾರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here