ಮುಂಜಾಗ್ರತೆ ಮೂಲಕ ಕೊವಿಡ್ ತಡೆಗಟ್ಟಬಹುದು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಮಹಾಮಾರಿ ಕೊವಿಡ್ 19 ಜಗತ್ತನ್ನೇ ತಲ್ಲಣಗೊಳಿಸಿದೆ. ಇದರಿಂದ ನಾವು ಹೊರ ಬರಬೇಕಾದರೆ ಜಾಗೃತಿ ಅಗತ್ಯವಾಗಿದೆ. ಈ ರೋಗದ ಮುಂಜಾಗ್ರತೆ ಕೈಕೊಳ್ಳುವುದರಿಂದ ಹರಡುವುದನ್ನು ತಡೆಯಬಹುದು ಎಂದು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೆ. ಎಸ್. ಪಾಟೀಲ್ ಹೇಳಿದರು.
ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಏನ್. ಎಸ್. ಎಸ್. ಹಾಗೂ ಏನ್. ಸಿ. ಸಿ ಘಟಕಗಳ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಕೊವಿಡ್ 19 ಜಾಗೃತಿ ಜನ ಆಂದೋಲನ ಪ್ರಚಾರ ನಿಮಿತ್ತ ಕೊವಿಡ್ ಜಾಗೃತಿ ಮತ್ತು ಕೊವಿಡ್ ರಕ್ಷಣೆಯ ಪ್ರತಿಜ್ಞಾವಿಧಿ ಬೋಧನೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೊವಿಡ್‌ನಿಂದ ರಕ್ಷಿಸಿಕೊಳ್ಳಲು ಸದಾ ಜಾಗೃತರಾಗಿರಬೇಕು ಮತ್ತು ತಪ್ಪದೆ ಮಾಸ್ಕ್ ಧರಿಸಬೇಕು. ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು. ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ನಿಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ನಾಗರಿಕರಲ್ಲಿ ಇದರ ಕುರಿತು ಜಾಗೃತಿ ಮೂಡಿಸಿ ದೇಶವನ್ನು ಕೊವಿಡ್‌ನಿಂದ ರಕ್ಷಿಸುವ ಕರ್ತವ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ನಂತರ ಮಹಾವಿದ್ಯಾಲಯದ ಸೂಚನಾ ಫಲಕಗಳಲ್ಲಿ ಕೊವಿಡ್ ಜಾಗೃತಿ ಮೂಡಿಸುವ ಭಿತ್ತಿಪತ್ರ ಅಂಟಿಸಲಾಯಿತು.
ಏನ್.ಎಸ್.ಎಸ್. ಘಟಕಾಧಿಕಾರಿಗಳಾದ ರಾಜು ಹೊಸಮನಿ, ಡಾ ನಾಗರಾಜ ದಂಡೋತಿ, ಸಹ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ್, ಪ್ರಾಧ್ಯಾಪಕರಾದ ಡಾ. ಚನ್ನಬಸವ, ಡಾ ಕರಿಬಸವೇಶ್ವರ, ಶ್ರೀದೇವಿ, ವೆಂಕಟೇಶ್ ನಾಯ್ಕ, ಮಂಜುನಾಥ್ ಗಾಳಿ, ಡಾ ಶರಣಪ್ಪ, ಶರಣಪ್ಪ ಜಾಲೀಹಾಳ್, ಮಹೇಶ್ ಬಿರಾದಾರ್, ವಿನೋದ ಮಡಿಬಸನಗೌಡರ, ಅರುಣ್ ಎ ಜಿ, ಡಾ. ಶಶಿಕಾಂಮ್ಮಪುರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here