25.8 C
Gadag
Friday, June 9, 2023

ಮೂರು ವರ್ಷದ ಕಂದನ ಕತ್ತು ಹಿಸುಕಿ ಕೊಂದ ಪಾಪಿ ತಂದೆ; ಕೊಲೆಗೆ ಮೂರ್ಛೆರೋಗವೇ ಪ್ರೇರಣೆ

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಅದೆಷ್ಟೋ ಗಂಡ-ಹೆಂಡಿರು ಮಕ್ಕಳು ಬೇಕೆಂದು ಮುಕ್ಕೋಟಿ ದೇವರಿಗೂ ಹರಕೆ ಹೊರುತ್ತಾರೆ. ಹುಟ್ಟಿದ ಮಗು ಅದು ಕಪ್ಪಗಿರಲಿ, ಬೆಳ್ಳಗಿರಲಿ ಹೆತ್ತರವರಿಗೆ ಹೆಗ್ಗಣವೇ ಮುದ್ದು ಎಂಬ ಗಾದೆಯಂತೆ ಮಕ್ಕಳನ್ನು ಅಪ್ಪಿಕೊಂಡು ಮುದ್ದಾಡುತ್ತಾರೆ. ಅದೇ ಮಕ್ಕಳ ಮದುವೆಯಾಗಿ ಮನೆಗೆ ಸೊಸೆ ಅಥವಾ ಅಳಿಯ ಬಂದರೂ ಮಕ್ಕಳ ಮೇಲಿನ ಮಮಕಾರ ಮಾತ್ರ ಕಡಿಮೆಯಾಗುವುದಿಲ್ಲ.

ಆದರೆ, ಇಲ್ಲೊಬ್ಬ ಪಾಪಿ ತಂದೆ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಭುವನೇಶ್ವರಿ ಎಂಬ ತನ್ನ ಮೂರು ವರ್ಷದ ಕಂದಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಗದಗ ತಾಲೂಕಿನಲ್ಲಿ ನಡೆದಿದ್ದು, ಪತಿಯ ವಿರುದ್ಧ ಪತ್ನಿ ಕವಿತಾ ಗಣೇಶ ಮಡಿವಾಳರ ದೂರು ನೀಡಿದ್ದಾಳೆ.

ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಗಣೇಶ ಬೂದಪ್ಪ ಮಡಿವಾಳರ(೩೩) ಎಂಬುವವನೇ ಮಗಳನ್ನು ಕೊಲೆ ಮಾಡಿದ ಕನಿಕರವಿಲ್ಲದ ನತದೃಷ್ಟ ತಂದೆಯಾಗಿದ್ದಾನೆ.

ಸತ್ರೆ ಮೂರು ದಿನದ ದುಃಖ!

ಆರೋಪಿ ಗಣೇಶ, ಹುಲಕೋಟಿಯ ಆರ್‌ಎಂಎಸ್ ಆಸ್ಪತ್ರೆಯಲ್ಲಿ ಮಗಳ ಫಿಟ್ಸ್ ಕಾಯಿಲೆಗೆ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ. ಇವಳಿಗೆ ಹೀಗೆ ಚಿಕಿತ್ಸೆ ಕೊಡಿಸುತ್ತಾ ಹೋದರೆ, ಹೊಲ ಮನೆ ಮಾರಾಟ ಮಾಡಬೇಕಾಗುತ್ತದೆ. ಅಲ್ಲದೇ, ಇದರಿಂದ ಜೀವನವೂ ಹಾಳಾಗುತ್ತದೆ. ಸತ್ತರೆ ಮೂರು ದಿನದ ದುಃಖವೆಂದು ತಿಳಿದು ಕೊಲೆಗೈದಿದ್ದಾನೆ. ಈ ದುರುದ್ದೇಶದಿಂದಲೇ ಜ.11ರಂದು ಗದಗ ಜಿಲ್ಲಾಸ್ಪತ್ರೆಯಿಂದ ಆಟೋದಲ್ಲಿ ನಗರದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಇರುವ ಮಲ್ಲಸಮುದ್ರ ಕ್ರಾಸ್ ಬಳಿ ಭುವನೇಶ್ವರಿ ಕುತ್ತಿಗೆಯಲ್ಲಿ ಕಟ್ಟಿದ್ದ ದಾರದಿಂದ ಕೊಲೆ ಮಾಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:
ಕಳೆದ ಜ.11 ರಂದು ಭುವನೇಶ್ವರಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಇದ್ದಾಗ ಇವಳಿಗೆ ಫಿಟ್ಸ್ ಬಂದಿದೆ. ಆಗ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಆರೋಪಿ ತಂದೆ ಗಣೇಶ, ತನ್ನ ಮಗಳನ್ನು ಗದಗ ಜಿಲ್ಲಾ ಆಸತ್ರ್ರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿನ ವೈದ್ಯರು ನಗರದ ತಾಲೂಕು ಹೆರಿಗೆ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರಿದ್ದು, ಅವರ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಆಗ ಆರೋಪಿ ಗಣೇಶ ಚಿಕಿತ್ಸೆಗಾಗಿ ಮಗಳು ಭುವನೇಶ್ವರಿಯನ್ನು ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಭುವನೇಶ್ವರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ವೈದ್ಯರು ಹೇಳಿದಂತೆ ಶವಗಾರದಲ್ಲಿ ಮಗಳ ಮೃತದೇಹವನ್ನಿಟ್ಟು ಬಳಿಕ ತನ್ನ ಹೆಂಡತಿ ಹಾಗೂ ಮನೆಯವರಿಗೆ ಸುದ್ದಿ ತಿಳಿಸಿದ್ದಾನೆ. ತಾಯಿ ಬಂದು ಮಗಳ ಶವ ನೋಡಿ ಸಾವಿನಲ್ಲಿ ಸಂಶಯವಿರುವುದಾಗಿ ದೂರಿದಾಗ ಎಫ್‌ಐಆರ್‌ನಲ್ಲಿ ಈ ಮೇಲಿನ ಸಂಗತಿಗಳು ತಿಳಿದು ಬಂದಿವೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts