ಮೊಬೈಲ್‌ನಲ್ಲಿ ಸೆರೆಯಾದವು ನಡುರಸ್ತೆಯಲ್ಲಿ ಓಡಾಡುತ್ತಿರುವ ಕರಡಿಗಳು

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನಡು ರಸ್ತೆಯಲ್ಲೇ ಕರಡಿಗಳು ಓಡಾಡುತ್ತಿರುವ ದೃಶ್ಯವನ್ನು ಸೋಮವಾರ ರಾತ್ರಿ ಕಾರಲ್ಲಿ ಹೊರಟಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತವರಗೇರಾ ವ್ಯಾಪ್ತಿಯ ಕನ್ನಾಳ ಗ್ರಾಮದ ಸುತ್ತ ಮುತ್ತಲಿನಲ್ಲಿ ಗ್ರಾಮಗಳ ನಡು ರಸ್ತೆಯ ಮದ್ಯ ಓಡಾಡುತ್ತಿದ್ದ ಕರಡಿಗಳನ್ನು ಕಾರಿನಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದ ಮೂಲಕ ಕಾರಿನಲ್ಲಿ ಕುಳಿತುಕೊಂಡು ಕ್ಯಾಮೆರಾದಿಂದ ಕರಡಿಗಳು ಓಡಾಡುವುದನ್ನು ಸೆರೆ ಹಿಡಿದಿದ್ದಾರೆ.

ಕನ್ನಾಳ ಗ್ರಾಮಕ್ಕೆ ತೆರಳುತ್ತಿರುವಾಗ ಕಾರು ವಾಹನ ಸವಾರರು ನಡುರಸ್ತೆಯಲ್ಲಿ ನಡೆದಾಡುತ್ತಿದ್ದ ಕರಡಿಗಳನ್ನು ಸೆರೆ‌ ಹಿಡಿದಿದ್ದಾರೆ. ಆದರೆ ಕನ್ನಾಳ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಗೆ ತೆರಳಬೇಕೆಂದರೆ ಸುತ್ತಲೂ ದಟ್ಟ ಅರಣ್ಯ ಪ್ರದೇಶದ ಕಾಡು ಇದ್ದು ಗ್ರಾಮದ ಸುತ್ತ ಬೆಟ್ಟಗುಡ್ಡ ಇರುವುದರಿಂದ ಇಲ್ಲಿ ಚಿರತೆ, ಕರಡಿಗಳು ಸಾಕಷ್ಟು ಇರುವುದರಿಂದ ಅರಣ್ಯ ಪ್ರದೇಶದ ಅಧಿಕಾರಿಗಳು ಇದುವರೆಗೂ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಂಡಿಲ್ಲ. ಯಾವುದೇ ನಾಮ ಫಲಕಗಳನ್ನು ಅಳವಡಿಸಿಲ್ಲ. ಇಲ್ಲಿ ಕರಡಿ ಚಿರತೆ ಹಾಗೂ ಹೆಬ್ಬಾವು ಊಸರವಳ್ಳಿ ಸೇರಿದಂತೆ ನಾನಾ ಕಾಡುಪ್ರಾಣಿಗಳು ಇವೆ ಎಂದು ತಿಳಿಸಿದ್ದಾರೆ.

ಚಿರತೆ ಮತ್ತು ಕರಡಿಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆ ಪ್ರದೇಶದವರು ಯಾವುದೇ ಅಪಾಯವಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ನಾಮಫಲಕಗಳನ್ನು ಹಾಕಿ, ಕರಡಿಗಳನ್ನು ಸೆರೆ ಹಿಡಿಯಲು ಮುಂದಾಗಬೇಕು ಎಂದು ಅರಣ್ಯ ಇಲಾಖೆಯವರಿಗೆ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here