ಯಲಬುರ್ಗಾ ಶಾಸಕ ಆಚಾರ್‌ಗೆ ಒಲಿದು ಬಂತಾ ಮಂತ್ರಿ ಭಾಗ್ಯ? ಶಾಸಕ ಹಾಲಪ್ಪ ಆಚಾರ್ ನಿವಾಸಕ್ಕೆ ಡಿಸಿಎಂ ಸವದಿ ದಿಢೀರ್ ಭೇಟಿ

0
Spread the love

-ಈಗ ಮಂತ್ರಿಯಾಗಿ, ಮುಂದಿನ ಸಲ ಕ್ಷೇತ್ರ ಬಿಟ್ಟು ಕೊಡಬೇಕೆಂಬ ಕಂಡಿಷನ್?

ವಿಜಯಸಾಕ್ಷಿ ವಿಶೇಷ ಸುದ್ದಿ,
ಕೊಪ್ಪಳ: ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಬಿಎಸ್‌ವೈ ದೆಹಲಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಬಿಎಸ್‌ವೈ ಬಯಸಿರುವ ನೂತನ ಮಂತ್ರಿಗಳ ಪಟ್ಟಿಯಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಬಸಪ್ಪ ಆಚಾರ್ ಹೆಸರು ಸಹ ಇದೆ ಎನ್ನಲಾಗಿದೆ.

ರವಿವಾರ ಸಂಜೆ ಡಿಸಿಎಂ ಲಕ್ಷ್ಮಣ ಸವದಿ ಶಾಸಕ ಹಾಲಪ್ಪ ಆಚಾರ್ ಅವರ ಮಸಬಹಂಚಿನಾಳ ನಿವಾಸಕ್ಕೆ ದಿಢೀರ್ ಭೇಟಿ ನೀಡಿ, ಕೆಲ ಕಾಲ ಚರ್ಚಿಸಿ ತೆರಳಿರುವುದು ಜಿಲ್ಲೆಗೆ ಮಂತ್ರಿಭಾಗ್ಯ ಸಿಗುವ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದಂತಾಗಿದೆ.

ಶಾಸಕ ಹಾಲಪ್ಪ ಆಚಾರ್ ಅವರನ್ನು ಸಚಿವರನ್ನಾಗಿಸುವ ಮೂಲಕ ಮುಂದಿನ ಚುನಾವಣೆಗೆ ಕ್ಷೇತ್ರ ಬಿಟ್ಟುಕೊಡಬೇಕೆಂಬ ಮಾತುಕತೆ ನಡೆಯಿತು ಎನ್ನಲಾಗಿದೆ. ಶಾಸಕರ ಪ್ರತಿಕ್ರಿಯೆ ಪಡೆಯಲು ಸಾಕಷ್ಟು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.


Spread the love

LEAVE A REPLY

Please enter your comment!
Please enter your name here