ಯೋಗ, ಯೋಗ್ಯತೆ ಇದ್ದವರು ಸಮಗ್ರ ಕರ್ನಾಟಕಕ್ಕೆ ಸಿಎಂ ಆಗಲಿ; ಯತ್ನಾಳಗೆ ಸಿ.ಟಿ.ರವಿ ಟಾಂಗ್

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸಮಗ್ರ ಕರ್ನಾಟಕದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಯಾರೂ ಮಾಡಬಾರದು. ಯೋಗ, ಯೋಗ್ಯತೆ ಇರುವ ಯಾರಾದರೂ ಸಮಗ್ರ ಕರ್ನಾಟಕದ ಸಿಎಂ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.


ಕೊಪ್ಪಳ ಗವಿಮಠದ‌ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದವರು ಕರ್ನಾಟಕದ ‌ಸಿಎಂ ಆಗಬೇಕು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಗೆ ಪ್ರತಿಕ್ರಿಯೆ‌ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದ ಕೆಲ ವರ್ಷ ಕರ್ನಾಟಕ ನಾಲ್ಕು ಭಾಗವಾಗಿ ಹಂಚಿ ಹೋಗಿತ್ತು.

ನಾಡಿನ ಭಾಷೆ, ಸಂಸ್ಕೃತಿ ಆಧರಿಸಿ, ಇಡೀ ಕರ್ನಾಟಕ ಏಕೀಕರಣವಾಗಿದೆ.‌ ಈ ಹಿನ್ನೆಲೆಯಲ್ಲಿ ಸಮಗ್ರ ಕರ್ನಾಟಕದ ಆಶಯಕ್ಕೆ ಯಾರೂ ಮಣ್ಣು ಹಾಕಬಾರದು ಎಂದು ಪುರುಚ್ಚರಿಸಿದರು.

ಹಾಗಾದ್ರೆ ಯತ್ನಾಳರು ಮಣ್ಣು ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಾಗೆ ಹೇಳಲಾರೆ ಬಸನಗೌಡ ಪಾಟೀಲ್ ಯತ್ನಾಳ ಅವರಷ್ಟು ನಾನು ದೊಡ್ಡವ ಮತ್ತು‌ ಪ್ರೌಡಿಮೆ ಇರುವನಲ್ಲ.‌ ಪಕ್ಷದ ಹಿರಿಯರು ಇದೆಲ್ಲವನ್ನೂ ಸರಿ ಮಾಡುತ್ತಾರೆ ಎಂದರು.

ಕೆಲ ಮಂತ್ರಿಗಳೂ ಕೋವಿಡ್19ನಿಂದ ಬಳಲಿದ್ದರಿಂದ ನೆರೆ ಪರಿಹಾರದಲ್ಲಿ ಒಂದಷ್ಟು ವಿಳಂಭವಾಗ್ತಿದೆ. ಆದರೆ,‌‌‌ ಕಾಂಗ್ರೆಸ್ ‌ನವರು ನೆರೆ ಪರಿಹಾರದ ವಿಷಯದಲ್ಲಿ ಗ್ರಾಮೋ ಫೋನ್ ಕ್ಯಾಸೆಟ್ ರೀತಿಯಲ್ಲಿ ಹಳೆಯ ಕ್ಯಾಸೆಟ್ ‌ಹಾಕ್ತಿದ್ದಾರೆ ಎಂದು ವ್ಯಂಗ್ಯವಾಡಿದರು.‌

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಡಿಸಿ ಎಸ್.ವಿಕಾಸ ಕಿಶೋರ,‌ ಎಸ್ಪಿ‌ ಟಿ.ಶ್ರೀಧರ ಇದ್ದರು.


Spread the love

LEAVE A REPLY

Please enter your comment!
Please enter your name here