ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ

0
Spread the love

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಸಿಂಧನೂರು ರೈತರಿಗೆ ಜಮೀನು ಬಾಡಿಗೆ ನೀಡಲು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಕುರಿ ಮತ್ತು ಜಾನುವಾರಗಳ ಸಂತೆ ಬಳಕೆದಾರರ ವೇದಿಕೆ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಆರಂಭಿಸಿಲಾಗಿದೆ.

ರೈತರು ತಮ್ಮ ಅಡಚಣೆ ಸಲುವಾಗಿ ತಾವು ಸಾಕಿ ಬೆಳೆಸಿದ ಜಾನುವಾರುಗಳನ್ನು ಕೃಷಿಕ ಇತರ ರೈತರಿಗೆ ಮಾರಾಟ ಮಾಡಿ ತಾವು ಮಾಡಿರುವ ಸಾಲಗಳನ್ನು ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ ಇತರ ಸಾಲಗಳನ್ನು ತೀರಿಸಲು ಸಿಂಧನೂರು ನಗರದಲ್ಲಿ ಎಪಿಎಂಸಿಯವರು ಸರ್ವೆ ನಂಬರ್ 995/p8 ಎಕರೆ 3.ಗುಂಟೆ 20 ಜಾಗವನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಧರಣಿ ಆರಂಭಿಸಲಾಗಿದೆ.

ಈಗಾಗಲೇ 2008ರಿಂದ 2018ವರೆಗೆ ಎಪಿಎಂಸಿ ಬಾಡಿಗೆ ಕೊಡುತ್ತಾ ಬಂದಿದ್ದು ಇದನ್ನು ಮುಂದುವರಿಸಿಕೊಂಡು ಹೋಗಬೇಕು.

ಯಾವುದೇ ಕಾರಣಕ್ಕೂ ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಬೇರೆಯವರಿಗೆ ಬಿಟ್ಟುಕೊಡಬಾರದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇದೇ ಜಾಗದಲ್ಲಿ ಜಾನುವಾರುಗಳನ್ನು ಮಾರಲು ಅನುಕೂಲ ಮಾಡಿಕೊಡಬೇಕು.

ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ದಂಡಾಧಿಕಾರಿಗಳು ಮಧ್ಯಸ್ಥಿಕೆಯನ್ನು ವಹಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಹಸೀಲ್ದಾರ್ ಕಾರ್ಯಾಲಯದ ಮುಂದೆ ನೂರಾರು ರೈತರು ಧರಣಿ ಕುಳಿತಿದ್ದಾರೆ.

D H ಪೂಜಾರ್, ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೋಯಿನ್ ಪಾಶಾ, ಕು.ಜಾ.ಸಂ ಬ.ವೆ ತಾಲ್ಲೂಕು ಅಧ್ಯಕ್ಷ, ಸಿಂಧನೂರು ಚಿಟ್ಟಿಬಾಬು, ಬಿ ಎನ್ ಯರದಿಹಾಳ, ಮುಸ್ತಫಾ ಅಮೀನ್ ಸಾಬ್ ನದಾಫ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ವರದಿ.ಡಾ.ಅಬ್ದುಲ್ ರಜಾಕ್


Spread the love

LEAVE A REPLY

Please enter your comment!
Please enter your name here