27.8 C
Gadag
Friday, September 22, 2023

ರೈತರಿಗೆ ತಲುಪದ ಸಾಲಮನ್ನಾ ಯೋಜನೆ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ರೈತರ ಸಾಲಮನ್ನಾ ಕುರಿತಂತೆ ಸರ್ಕಾರವಿನ್ನೂ ಸರಿಯಾದ ಮಾನದಂಡ ಬಳಸಿಲ್ಲ. ಹೀಗಾಗಿ ಸಾಲಮನ್ನಾ ಯೋಜನೆ ರೈತರಿಗೆ ಇನ್ನೂ ಸರಿಯಾಗಿ ತಲುಪಿಲ್ಲವೆಂದು ರೈತ ಸೇನಾ ಕರ್ನಾಟಕ ರಾಜ್ಯ ವಕ್ತಾರ ಗುರು ರಾಯನಗೌಡ್ರ ಸಿಡಿಮಿಡಿಗೊಂಡರು.
ಪಟ್ಟಣದಲ್ಲಿ ಮಹದಾಯಿ ಮಲಪ್ರಭೆ ಜೋಡಣೆಗಾಗಿ ನಡೆಯುತ್ತಿರುವ ರೈತಸೇನಾ ಕರ್ನಾಟಕ ಹೋರಾಟ ಸಮಿತಿ ಧರಣಿ ಶನಿವಾರಕ್ಕೆ 1926 ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು ರೈತರ 2 ಲಕ್ಷ ರೂ ವರೆಗಿನ ಸಾಲಮನ್ನಾ ಮಾಡುವುದಾಗಿ 2017 ರಲ್ಲಿ ಘೋಷಿಸಿದ್ದರು. ಸಾಲಮನ್ನಾ ಮಾಡಲು ಕೆಲವೊಂದು ದಾಖಲೆಗಳನ್ನು ರೈತರು 2017 ರ ಡಿ. 30 ರೊಳಗಾಗಿ ನೀಡುವಂತೆ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಅನೇಕರು ಈ ಅವಧಿಯಲ್ಲಿ ಎಲ್ಲ ದಾಖಲೆಗಳನ್ನು ನೀಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ ಯೋಜನೆ ಸರಿಯಾದ ರೂಪದಲ್ಲಿ ಜಾರಿಯಾಗಲಿಲ್ಲ. ಮುಂದೆ ಬಿಜೆಪಿ ರಾಜ್ಯ ಸರ್ಕಾರ ಇದೇ ಅ. 20 ರೊಳಗಾಗಿ ಎಲ್ಲ ದಾಖಲೆಗಳನ್ನು ನೀಡಲು ರೈತರಿಗೆ ಸೂಚಿಸಿತ್ತು. ಈ ಅವಧಿಯಲ್ಲಿಯೂ ಅನೇಕ ಕಟುಬಾಕಿದಾರರು ಅಗತ್ಯದ ಪಡಿತರ ಚೀಟಿ ಮತ್ತು ಇನ್ನಿತರ ದಾಖಲೆ ನೀಡಿದಾಗಲೂ ಅವರ ಸಾಲಮನ್ನಾ ಮಾಡಲು ಸರ್ಕಾರ ಚಿಂತನೆ ಮಾಢಿಲ್ಲ. ದಾಖಲೆಗಳನ್ನು ನೀಡಲು ಕಡಿಮೆ ಅವಧಿ ಸರ್ಕಾರ ನೀಡಿದ್ದರಿಂದ ತೊಂದರೆಯಾಗಿದೆ. ಹೀಗಾಗಿ ಈ ಅವಧಿ ವಿಸ್ತರಿಸಬೇಕೆಂದು ರಾಯನಗೌಡ್ರ ಸರ್ಕಾರಕ್ಕೆ ಆಗ್ರಹಿಸಿದರು.
ಸಚಿವ ಜಗದೀಶ ಶೆಟ್ಟರ ಅವರನ್ನು ಅ. ೨೩ ರಂದು ರೈತ ಸೇನಾ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಭೇಟಿಯಾಗಿ ಎಲ್ಲ ಮಾಹಿತಿ ನೀಡಿದ್ದೇವೆ. ಅ. 27ರೊಳಗಾಗಿ ಈ ಸಮಸ್ಯೆ ಪರಿಹರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಇದಾಗದಿದ್ದರೆ ಹೋರಾಟ ದೀರ್ಘವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಯನಗೌಡ್ರ ಹೇಳಿದರು.
ಎಸ್.ಬಿ. ಜೋಗಣ್ಣವರ, ಶಂಕರಗೌಡ ಪಾಟೀಲ,ಮಲ್ಲಣ್ಣ ಅಲೈಕಾರ ಮಾತನಾಡಿದರು. ಧರಣಿಯಲ್ಲಿ ರಮೇಶ ನಾಯ್ಕರ್, ವಾಸು ಚವ್ಹಾಣ, ಅರ್ಜುನ ಮಾನೆ, ಹುನಮಂತ ಸರನಾಯ್ಕರ್, ಎ.ಪಿ. ಪಾಟೀಲ, ಶಂಕರಗೌಡ ಪಾಟೀಲ, ಮಹೇಶ ನಾವಳ್ಳಿ, ಕಲ್ಲಪ್ಪ ಮೊರಬದ ಅನೇಕರು ಉಪಸ್ಥಿತರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!