ರೈತರು ಕೃಷಿ ವಿವಿಯ ತಾಂತ್ರಿಕತೆ ಬಳಸಿಕೊಳ್ಳಿ: ಪಾಟೀಲ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಕೊಪ್ಪಳ: ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಅಂದಾಜು 1,55,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು , ಉತ್ತಮವಾಗಿ ಮಳೆಯಾಗುತ್ತಿರುತ್ತದೆ . ಕೊಪ್ಪಳ ಜಿಲ್ಲೆಯಲ್ಲಿ ಜೋಳ , ಕಡಲೆ ಹಾಗೂ ಶೇಂಗಾ ಬೆಳೆಗಳು ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿರುತ್ತವೆ.

ಅಲ್ಲದೆ ಕುಸುಬೆ , ಆಗಸೆ ಮತ್ತು ಹುರುಳಿಯನ್ನು ಅಲ್ಲಲ್ಲಿ ಬೆಳೆಯುತ್ತಾರೆ , ಪ್ರಮುಖ ಬೆಳೆಯಾದ ಜೋಳ- ಎಂ .35 – 1 ತಳಿಯ ಬೀಜಗಳು ಹಗರಿ ಮತ್ತು ಸಿರುಗುಪ್ಪ ಸಂಶೋಧನಾ ಕೇಂದ್ರಗಳಲ್ಲಿ , ಜಿ.ಎಸ್ . 23 ಬೀಜಗಳು ರದ್ದೇವಾಡಗಿ ಸಂಶೋಧನಾ ಕೇಂದ್ರದಲ್ಲಿ , ಕಡಲೆ ತಳಿಗಳಾದ ಜೆಜೆ -11 ಹಾಗೂ ಬಿ.ಜಿ.ಡಿ. 103 , ಜಿಬಿಎಂ -2 , ಕಾಬೂಲಿ ಕಡಲೆ ಎಂಎನ್ಕಿ -1 , ಕುಸುಬೆಏಎಸ್ಎಫ್ -764 , ನವಣೆ ಹೆಚ್ , ಎಂ.ಟಿ. – 100-1 , ಊದಲು ಡಿ.ಹಚ್.ಬಿ.ಎಂ. – 93-2 , ಹಾರಕ ಹೆಚ್.ಆರ್.ಕೆ -1 ಹಾಗೂ ಕೊರಲೆ – ಹೆಚ್.ಬಿ.ಕೆ.- ತಳಿಗಳು ಬೀಜಘಟಕ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ ಹೇಳಿದರು.

ಅಲ್ಲದೆ , ದೃಢೀಕೃತ ಬೀಜಗಳು ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮ ಗಳಲ್ಲಿಯೂ ಸಹ ಲಭ್ಯವಿದ್ದು , ಅಲ್ಲಿಯೂ ಸಹ ರೈತರು ನೇರವಾಗಿ ಖರೀದಿಸಬಹುದಾಗಿದೆ . ಬೀಜೋಪಚಾರಕ್ಕಾಗಿ ಜೈವಿಕ ಶಿಲೀಂದ್ರನಾಶಕಗಳಾದ ಟ್ರೈಕೋಡರ್ಮಾ , ಸುಡೋಮೋನಸ್ ಇವು ಸಾವಯವ ಕೃಷಿ ಸಂಸ್ಥೆ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ ಎಂದರು.

ಮಣ್ಣಿಗೆ ಅಗತ್ಯವಾದ ಎರೆಹುಳು ಗೊಬ್ಬರ ಹಾಗೂ ಎರೆ ಜಲ ಕಡಲೆಯ ಹಸಿರು ಕೀಡೆ ನಿಯಂತ್ರಣಕ್ಕೆ ಟ್ರೈಕೋಗ್ರಾಮ ಪರತಂತ್ರ ದೇವಿ ಹಾಗೂ ಗೊಣ್ಣೆಹುಳು ನಿಯಂತ್ರಣಕ್ಕೆ ಮೆಟಲೈಜಿಯಂ ಜೈವಿಕ ಶಿಲೀಂದ್ರನಾಶಕ ಇವುಗಳು ಜೈವಿಕ ನಿಯಂತ್ರಣ ಪ್ರಯೋಗಾಲಯ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ . ರೈತಬಾಂಧವರು ನೂತನ ತಳಿಯ ಬೀಜಗಳಿಗಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನ ಬೀಜಘಟಕದ ವಿಶೇಷಾಧಿಕಾರಿಗಳಾದ ಡಾ . ಬಸವೇಗೌಡ ( 9480696343 ) ಮತ್ತು ಜೈವಿಕ ಪರಿಕರಗಳಿಗಾಗಿ ಡಾ . ಅರುಣಕುಮಾರ್ ಹೊಸಮನಿ ( 9449762175 ) ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಈಗಾಗಲೇ ಮುಂಗಾರಿನಲ್ಲಿ ಬಿತ್ತನೆಯಾಗಿರುವ ತೊಗರಿಯು ಹೂ ಬಿಡುವ ಹಂತದಲ್ಲಿದ್ದು , ರೈತರು ಕಲಬುರಗಿ ಕೃಷಿ ಸಂಶೋಧನಾ ಕೇದ್ರದಿಂದ ಬಿಡುಗಡೆಯಾಗಿರುವ ಪಲ್ಸ್ ಮಾಜಿಕ ನ್ನು ಬಳಸಬಹುದಾಗಿದೆ . ಪಲ್ಸ್ ಮ್ಯಾಜಿಕ್ ಪಡೆಯಲು ಡಾ . ಲಕ್ಷಣ ಚಿಂಚೋಳಿ ( 8008644224 ) ರವರನ್ನು ಸಂಪರ್ಕಿಸಲು ಕೋರಿದರು.

ಭೂಮಿ ಸಿದ್ಧತೆ ಮತ್ತು ತಯಾರಿ: ರೈತಬಾಂಧವರು ಆಳವಾದ ಉಳುಮೆ ಮಾಡಿ ಭೂಮಿಯನ್ನು ಹದಮಾಡಿಕೊಳ್ಳುವುದು . ರೈತಬಾಂಧವರು ದೃಢೀಕೃತ ಬಿತ್ತನೆ ಬೀಜಗಳನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರು / ರೈತ ಸಂಪರ್ಕ ಕೇಂದ್ರ ಹಾಗೂ ನೋಂದಾಯಿತ ಸಂಸ್ಥೆಗಳಿಂದ ಖರೀದಿಸಿ ಜೈವಿಕ ಶಿಲೀಂದ್ರನಾಶಕಗಳಿಂದ ಸೂಕ್ತ ಬೀಜೋಪಚಾರ ಮಾಡುವುದು , ನಂತರ ಸೂಕ್ತ ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆ ಕಾರ್ಯ ಕೈಗೊಳ್ಳುವುದು , ಕಡಲೆ ಬಿತ್ತನೆ ಪೂರ್ವದಲ್ಲಿ 50 ಗ್ರಾಂ , ಚೋಳ ಆಥವಾ ಸೂರ್ಯಕಾಂತಿ ಬೀಜವನ್ನು ಮಿಶ್ರಣ ಮಾಡಿ ಬಿತ್ತುವುದು.

ಬೆಳೆಗಳ ಬದುವಿನಲ್ಲಿ ಔಡಲ ಬೀಜವನ್ನು ಆಕರ್ಷಕ ಬೆಳೆಯಾಗಿ ಬೆಳೆಯುವುದರಿಂದ ಎಲೆ ತಿನ್ನುವ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು . ಶೇಂಗಾ ಬೆಳೆಯ ಸುತ್ತಲು ಸಜ್ಜೆ ಅಥವಾ ಜೋಳವನ್ನು ಬಲೆ ಬೆಳೆಯಾಗಿ ಬೆಳೆಯುವುದು ಸೂಕ್ತ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಆದ ಡಾ . ಎಂ.ಬಿ.ಪಾಟೀಲ ರವರು ರೈತರಲ್ಲಿ ಮನವಿ ಮಾಡಿಕೊಂಡರು.


Spread the love

LEAVE A REPLY

Please enter your comment!
Please enter your name here