ರೈತ ಸಂಪರ್ಕ ಕೇಂದ್ರದ ಅಧಿಕಾರಿ ವರ್ತನೆಗೆ ಖಂಡನೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವರ್ತನೆಗೆ ಮತ್ತು ತಾಡಪಲ ವಿತರಣೆಯಲ್ಲಿ ತಾರತಮ್ಯ, ಅವ್ಯವಹಾರ ಖಂಡಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ರೈತ ಸಂಘ ವತಿಯಿಂದ ಉಪತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ದಲಿತ ರೈತ ಸಂಘದ ಅಧ್ಯಕ್ಷ ದುರಗೇಶ ಬಂಡಿವಡ್ಡರ ಮಾತನಾಡಿ, ರೈತರ ಅನುಕೂಲಕ್ಕಾಗಿ ಸರ್ಕಾರ ಕೃಷಿ ಇಲಾಖೆಯಿಂದ ಪ್ರತಿ ವರ್ಷ ಸಬ್ಸಿಡಿ ದರದಲ್ಲಿ ತಾಡಪಲಗಳನ್ನು ವಿತರಿಸುತ್ತಿದೆ. ಆದರೆ, ನರೇಗಲ್ಲ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿಜವಾದ ರೈತರಿಗೆ ತಲುಪಬೇಕಾದ ತಾಡಪತ್ರಿಗಳನ್ನು ರಾಜಕೀಯ, ಗಣ್ಯ ವ್ಯಕ್ತಿಗಳ ಮನೆಗೆ ಸೇರಿಸುತ್ತಿದ್ದಾರೆ.
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು, ಕೇವಲ ಎಂಎಲ್‌ಎ, ಸಂಸದರ, ಜಿ.ಪಂ, ತಾ.ಪಂ ಅಧ್ಯಕ್ಷ ಹಾಗೂ ಸದಸ್ಯರ ಮಾತುಗಳನ್ನು ಕೇಳಿ ತಮಗೆ ಬೇಕಾದ ಶ್ರೀಮಂತ ರೈತರಿಗೆ ತಾಡಪತ್ರಿಗಳನ್ನು ನೀಡುತ್ತಿದ್ದಾರೆ. ಕೃಷಿ ಸಾಮಗ್ರಿಗಳ ವಿತರಣೆಯಲ್ಲಿ ಪದೇ ಪದೇ ಕೃಷಿ ಅಧಿಕಾರಿ ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ನರೇಗಲ್ಲ ಸುತ್ತಮುತ್ತಲಿನ ದಲಿತ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪತಹಸೀಲ್ದಾರ ಅನುಪಸ್ಥಿತಿಯಲ್ಲಿ ನಾಡಕಚೇರಿ ಗಣಕ ಯಂತ್ರ ನಿರ್ವಾಹಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದುರಗಪ್ಪ ಬಂಡಿವಡ್ಡರ, ಯಲ್ಪಪ್ಪ ಮಣ್ಣೊಡ್ಡರ, ರಾಮಣ್ಣ ಹನಮಸಾಗರ, ವೆಂಕಟೇಶ ಬಂಡಿವಡ್ಡರ, ಹನಮಂತಪ್ಪ ಮಣ್ಣೊಡ್ಡರ, ಸುರೇಶ ಮಣ್ಣೊಡ್ಡರ, ಆಂಜನೇಯ ನವಲಗುಂದ, ಕಳೂಳೆಪ್ಪ ಬಂಡಿವಡ್ಡರ, ಹುಚ್ಚಪ್ಪ ಬಂಡಿವಡ್ಡರ, ಅಂಜನೇಯ ಕಟ್ಟಿಮನಿ, ಕಲ್ಲಪ್ಪ ಬಂಡಿವಡ್ಡರ, ದೊಡ್ಡಮರದಪ್ಪ ಕಟ್ಟಿಮನಿ ಸೇರಿದಂತೆ ಇತರರಿದ್ದರು.


Spread the love

LEAVE A REPLY

Please enter your comment!
Please enter your name here