ಲಕ್ಕುಂಡಿ ಸ್ಮಶಾನದಲ್ಲಿ ವನಮಹೋತ್ಸವ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಕುಂಡಿ
ಇಲ್ಲಿಯ ಕದಾಂಪೂರ ರಸ್ತೆಯಲ್ಲಿರುವ ಮುಸಲ್ಮಾನ ಸಮಾಜದ ಸ್ಮಶಾನದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ (ಕಬರಸ್ತಾನ) ವನ ಮಹೋತ್ಸವ ಆಚರಿಸಲಾಯಿತು.
ಸಸಿ ನೆಡುವುದರ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಪೀರಸಾಬ ನದಾಫ ಅವರು ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ತೊಂದರೆಯಾಗಿ ಬೆಳೆದು ನಿಂತಿದ್ದ ಜಾಲಿ ಕಂಟಿಗಳು ಸೇರಿದಂತೆ ಇತರೆ ವ್ಯಾಜ್ಯ ಗಿಡಗಳನ್ನು ಕಳೆದ ವಾರ ಸ್ವಚ್ಛಗೊಳಿಸಲಾಯಿತು.
ಈಗ ಕಮಿಟಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ 350 ಸಸಿಗಳನ್ನು ನೆಡಲಾಗಿದೆ. ಇದರಲ್ಲಿ 300 ಹುಣಸೆ ಸಸಿ ಸೇರಿದಂತೆ ಇತರೆ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಬರುವ ಜನರಿಗೆ ನೆರಳಿನೊಂದಿಗೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ಎಂದರು.
ಕಮಿಟಿ ಉಪಾಧ್ಯಕ್ಷ ನಜೀರಅಹ್ಮದ ಕಿರಟಗೇರಿ, ಎಂ.ಎನ್.ಉಮಚಗಿ, ಜಂದೀಸಾಬ ನದಾಫ, ರುದ್ರಪ್ಪ ಮುಸ್ಕಿನಬಾವಿ,ಮೈಲಾರಪ್ಪ ಗುಂಜಳ, ಈರಣ್ಣ ಕಂಚಗಾರ, ಅಬ್ಬಾಸಲಿ ಹಂದ್ರಾಳ, ಇಬ್ರಾಹೀಂಸಾಬ ನದಾಫ, ಅಶೋಕ ಮುಸ್ಕಿನಬಾವಿ, ಹಸನಸಾಬ ನದಾಫ, ಕಾಶಿಂಸಾಬ ತಹಶಿಲ್ದಾರ, ಜಂದೀಸಾಬ ಹಮ್ಮಸಾಗರ, ಇಮ್ರಾನ ಕೊರ್ಲಹಳ್ಳಿ, ನಾಮದೇವ ದಾಸ್ಮನಿ, ಜಾಕೀರಸಾಬ ಯರಗುಡಿ ಪೀರಸಾಬ ನದಾಫ ಹಾಜರಿದ್ದರು.
 


Spread the love

LEAVE A REPLY

Please enter your comment!
Please enter your name here