HomeEntertainmentವೀರೇಶ್ವರ ಪುಣ್ಯಾಶ್ರಮ, ಹುಚ್ಚಿರೇಶ್ವರ ಮಠಕ್ಕೆ ಬೇಟಿ ನೀಡಿದ ಕಾಮಿಡಿ ಕಿಲಾಡಿ; ಭಾವೈಕ್ಯ ಬ್ರಹ್ಮ ಚಿತ್ರ ಯಶಸ್ಸಿಗೆ...

ವೀರೇಶ್ವರ ಪುಣ್ಯಾಶ್ರಮ, ಹುಚ್ಚಿರೇಶ್ವರ ಮಠಕ್ಕೆ ಬೇಟಿ ನೀಡಿದ ಕಾಮಿಡಿ ಕಿಲಾಡಿ;
ಭಾವೈಕ್ಯ ಬ್ರಹ್ಮ ಚಿತ್ರ ಯಶಸ್ಸಿಗೆ ಮಠಗಳ ಆಶೀರ್ವಾದ ಪಡೆದ ಮಾಸ್ಟರ್ ಆನಂದ್

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ/ನರೇಗಲ್ಲ:
ಚಲನಚಿತ್ರ ನಟ ಮಾಸ್ಟರ್ ಆನಂದ ಮಂಗಳವಾರ ಗದಗ ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ಕೋಡಿಕೊಪ್ಪದ ಶ್ರೀ ಹಠಯೋಗಿ ಹುಚ್ಚಿರೇಶ್ವರ ಮಠಕ್ಕೆ ಭೇಟಿ ನೀಡಿ ದರ್ಶನ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡ್ರಗ್ಸ್ ಪ್ರಕರಣಗಳಲ್ಲಿ ಈಗಾಗಲೇ ಸಾಕಷ್ಟು ಚನಲಚಿತ್ರ ನಟ, ನಟಿಯರ ಹೆಸರು ಕೇಳಿಬರುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ಕಲಾವಿದರಿಗೆ ಶಾರೀರಿಕ ಸೌಂದರ್ಯ ಅತೀ ಮುಖ್ಯವಾಗಿದ್ದು, ಡ್ರಗ್ಸ್ ಸೇರಿದಂತೆ ಮಾದಕ ದ್ರವ್ಯಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ. ಮಾದಕ ದ್ರವ್ಯ ಸೇವನೆ ಯಾರು ಮಾಡಿದರೂ ಅದು ತಪ್ಪೇ. ಚಿತ್ರರಂಗ ವರ್ಣರಂಜಿತವಾಗಿರುವುದರಿಂದ ಮಾದಕ ದ್ರವ್ಯ ಪ್ರಕರಣವು ಹೆಚ್ಚು ಪ್ರಚಾರಗೊಳ್ಳುತ್ತಿದೆ.

ನಟ, ನಟಿಯರು ಹತ್ತು ಹಲವಾರು ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿರುತ್ತವೆ. ಅಲ್ಲಿ ಸಾಕಷ್ಟು ಜನರು ಸೇರುತ್ತಾರೆ ಅವರೆಲ್ಲರೂ ನಮ್ಮಗೆ ಪರಿಚಯವಿರುದಿಲ್ಲ ಅವರ ಹಿನ್ನೆಲೆ ನಮಗೆ ತಿಳಿದಿರುವುದಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿರುವುದು ಅವಶ್ಯ ಎಂದರು.


ಹುಚ್ಚೀರೇಶ್ವರ ಮಠದಿಂದ ಗದಗನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದ ನಟ ಆನಂದ್, ಪೂಜ್ಯ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು, ಪಂಚಾಕ್ಷರಿ ಗವಾಯಿಗಳು ಹಾಗೂ ಕುಮಾರೇಶ್ವರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಈ ವೇಳೆ ಗದಗ ನಂಟಿನ ಬಗ್ಗೆ ಮಾತನಾಡಿದ ಅವರು, 8 ವರ್ಷಗಳ ಹಿಂದೆ ಗದಗ ನಗರದಲ್ಲಿ ಬನ್ನಿ ಎಂಬ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಹಠಯೋಗಿ ಹುಚ್ಚೀರೇಶ್ವರ ಅಜ್ಜನವರ ಪವಾಡಗಳನ್ನು ಕೇಳಿದ್ದೆ ಇಂದು ಮಠದ ದರ್ಶನ ಮಾಡಿದ್ದೇನೆ. ಪುಟ್ಟರಾಜ ಕವಿ ಗವಾಯಿಗಳು ನನಗೆ ಈ ಹಿಂದೆಯೇ ಆಶೀರ್ವಾದ ಮಾಡಿದ್ದಾರೆ ಎಂದು ನೆನೆದರು.

ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಂಕಲಿ ಮಠದ ಪೂಜ್ಯರ ಜೀವನ ಆಧಾರಿತ ಚಲನಚಿತ್ರವಾದ ಭಾವೈಕ್ಯ ಬ್ರಹ್ಮದ ಚಿತ್ರೀಕರಣವು ಪ್ರಗತಿಯಲ್ಲಿದ್ದು, ಚಿತ್ರೀಕರಣ ಮುಗಿದ ನಂತರ ಹಠಯೋಗಿ ವೀರಪ್ಪಜ್ಜನ ಜೀವನ ಆಧಾರಿತ ಚಲನಚಿತ್ರವನ್ನು ಮಾಡುವ ಯೋಜನೆ ಹೊಂದಿದ್ದೇವೆ. ಈಗಾಗಲೇ ನಿರ್ಮಾಪಕರು ಆಸಕ್ತಿ ತೊರಿದ್ದಾರೆ ಎಂದರು.

ನಾಗರಾಜ ಹುಯಿಲಗೋಳ, ಡಾ. ಸಂಜೀವ ರಡ್ಡೇರ, ಗೌಡಪ್ಪಗೌಡ ಗೌಡಪ್ಪಗೌಡ್ರ, ಬಿ.ಎಂ. ಪಾಟೀಲ, ಡಾ. ಕಿರಣ ಮುಂಡಗೋಡ, ಸಂತೋಷ ಕೆ, ಮಲ್ಲಯ್ಯ ಗುಂಡಗೋಪುರಮಠ, ಮರಿಯಪ್ಪ ಶಿರಗುಂಪಿ, ಮಲ್ಲಪ್ಪ ಧೂಸಲ್, ಅಮರೇಶ ಬಡಿಗೇರ, ಹನಮಂತಪ್ಪ ಬಂಡಿವಡ್ಡರ, ಮೋಹನ ಬಡಿಗೇರ, ಮುತ್ತಪ್ಪ ಜಂತ್ಲಿ, ಬಸವರಾಜ ಕಡೇತೋಟದ, ಚಂದ್ರು ಅಣ್ಣೀಗೇರಿಮಠ ಸೇರಿದಂತೆ ಇತರರಿದ್ದರು. 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!