ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಕಮಲಮ್ಮ (105)ಹೀರೇಗೌಡ್ರ ಅವರು ಶನಿವಾರ ನಿಧನರಾದರು. ಅವರು ಕೊವಿಡ್-19 ನಿಂದ ಗುಣಮುಖರಾಗಿದ್ದರು. ಆದರೆ ಇತ್ತಿಚೆಗೆ ಅವರು ಆಹಾರ ತ್ಯಜಿಸಿದ್ದರು.
ಮೃತರು ಏಳು ಪುತ್ರಿಯರು, ಐವರು ಪುತ್ರರು ಸೇರಿದಂತೆ ನೂರಾರು ಮೊಮ್ಮಕ್ಕಳನ್ನು ಅಗಲಿದ್ದಾರೆ.
Advertisement
ಜಿಪಂ ಮಾಜಿ ಅಧ್ಯಕ್ಷ ಎಚ್.ಎಲ್.ಹಿರೇಗಾಡ್ರ ಹಾಗೂ ಎಪಿಎಂಸಿ ಸದಸ್ಯ ವೆಂಕನಗೌಡ ಅವರ ತಾಯಿಯವರಾಗಿದ್ದಾರೆ.
ಕೊಪ್ಪಳದಲ್ಲಿ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ನಿಧನವಾಗಿದ್ದಾರೆ .
ಶನಿವಾರ ಸಂಜೆ 4 ಗಂಟೆಗೆ ಕಾತರಕಿ ಗ್ರಾಮದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.