ಶಿರಹಟ್ಟಿ ತಾಲೂಕಾ ಆಸ್ಪತ್ರೆಯಲ್ಲಿ ನಿಲ್ಲಲಾರದ 108 ಅಂಬ್ಯುಲೆನ್ಸ್…!

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಶಿರಹಟ್ಟಿ
ಸರಕಾರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದಕ್ಕೆ ಕೊವಿಡ್-19ನಂತಹ ಸಂಕಷ್ಟದಲ್ಲಿಯೂ ಸಹ ಜನತೆಯ ಮನೆ ಬಾಗಿಲಿಗೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಆದರೆ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಜನತೆಯ ಜೀವದ ಜೊತೆ ಚೆಲ್ಲಾಟ ಹಾಗೂ ವೈದ್ಯರ ಅಸಹಾಯಕತೆ ಇಲ್ಲಿ ಕೇಳೋರು ಯಾರು ಇಲ್ಲದಂತಾಗಿದೆ.
6 ತಿಂಗಳುಗಳಿಂದ ಸಮಸ್ಯೆ : ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗಾಗಲೀ ಅಥವಾ ಬೇರೆ ಸ್ಥಳಗಳಿಗೆ ತೆರಳಲು ವರವಾಗಬೇಕಿದ್ದಂತಹ 108 ಅಂಬ್ಯುಲೆನ್ಸ್ ಕಳೆದ ಆರು ತಿಂಗಳುಗಳಿಂದ ಸಮರ್ಪಕವಾಗಿ ಕಾರ‍್ಯನಿರ್ವಹಿಸದೇ ಇರುವುದಕ್ಕೆ ಆಸ್ಪತ್ರೆಯಲ್ಲಿ ಇರುವಂತಹ ವೈದ್ಯರು ಅಂಬ್ಯುಲೆನ್ಸ್‌ಗಾಗಿ ನಿತ್ಯವೂ ಪರದಾಡುತಿದ್ದಾರೆ. ವೈದ್ಯರು ಅಂಬ್ಯುಲೆನ್ಸ್‌ಗಾಗಿ ಸಂಪರ್ಕಿಸಿದಂತಹ ಸಂದರ್ಭದಲ್ಲಿ ಬೇರೆ ಸ್ಥಳಗಳಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಅನಿವಾರ್ಯವಾದಾಗ ಹೆರಿಗೆಯಾದ ತಾಯಂದಿರನ್ನು ಮನೆಗೆ ಕಳುಹಿಸಿಕೊಡುವುದಕ್ಕೆ ಇರುವ ನಗು-ಮಗು ವಾಹನ, ಹಾಗೂ ಜೆಎಸ್‌ವೈ ಅಂಬ್ಯುಲೆನ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ.

ಕಳೆದ ಆರು ತಿಂಗಳುಗಳಿಂದ 108 ಅಂಬ್ಯುಲೆನ್ಸ್ ತಾಲೂಕಾ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ, ಇಲ್ಲಿಯೇ ಖಾಯಂ ಇರಬೇಕೆಂದು ಹೇಳಿದರೂ ಬೇರೆ ಕಡೆಗಳಲ್ಲಿ ಇರುವುದಾಗಿ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದ ನಮಗೂ ಹಾಗೂ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿವಿಕೆ ಏಜೆನ್ಸಿಯವರ ಗಮನಕ್ಕೂ ತಂದರೂ ಸಹ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಚಂದ್ರು ಲಮಾಣಿ, ವೈದ್ಯಾಧಿಕಾರಿ.

 

ಗುರುವಾರ ಮಧ್ಯರಾತ್ರಿ ಪರದಾಡಿದ ಜನತೆ 
ತಾಲೂಕಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯರಾತ್ರಿ ಒಂದು ಪಾಯಿಜನ್ ಕೇಸ್, ಒಂದು ಡಿಲೆವರಿ ಕೇಸ್ ಮತ್ತೊಂದು ತೀವ್ರ ಜ್ವರದಿಂದ ಬಳಲುತ್ತಿದ್ದಂತಹ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದೇ ಇರುವುದಕ್ಕೆ ಪರದಾಡಿದ ಘಟನೆಯು ಜರುಗಿದ್ದು, ಮಧ್ಯರಾತ್ರಿಯೇ ವೈದ್ಯ ಚಂದ್ರು ಲಮಾಣಿ ಮತ್ತು ಸಿಬ್ಬಂದಿ ಎಷ್ಟೇ ಪ್ರಯತ್ನ ಮಾಡಿದರೂ ಅಂಬ್ಯುಲೆನ್ಸ್ ಲಭ್ಯವಾಗಲಿಲ್ಲ. ಅನಿವಾರ್ಯವಾಗಿ ಲಭ್ಯವಿರುವ ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ?
ಜನತೆಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ಒದಗಿಸಲು ಅನುಕೂಲ ಕಲ್ಪಿಸುವುದಕ್ಕಾಗಿಯೇ ಇರುವಂತಹ 108 ಅಂಬ್ಯುಲೆನ್ಸ್ ಇದ್ದು, ಆದರೆ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಲಭ್ಯವಿಲ್ಲದೇ ಇರುವುದರಿಂದ ಸದ್ಯ ಕೊವಿಡ್-19 ನಿಂದ ತತ್ತರಿಸಿರುವಂತಹ ಜನತೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವಂತಹ ವಯೋವೃದ್ಧರಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಜೀವಕ್ಕೆ ಕುತ್ತು ಬಂದರೆ ಯಾರು ಹೊಣೆ ? ಎಂಬುದಕ್ಕೆ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕಿದೆ.


Spread the love

LEAVE A REPLY

Please enter your comment!
Please enter your name here