25.8 C
Gadag
Friday, June 9, 2023

ಶ್ರೀರಾಮಮಂದಿರದ ರೊಕ್ಕದ ಲೆಕ್ಕ ಬೇಕಾದವ್ರು ವಿ ಎಚ್ ಪಿ ಹೆಡ್ ಆಫೀಸ್ ಗೆ ಹೋಗಿ: ಮುತಾಲಿಕ್ ತಿರುಗೇಟು

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಮುಖ್ಯಮಂತ್ರಿಗಳಿಬ್ಬರೂ ಶ್ರೀರಾಮನ ಕುರಿತು ವಿವಾದಾತ್ಮಕ ಬಾಲಿಶ್, ಕೀಳುಮಟ್ಟದ ಹೇಳಿಕೆ ನಿಲ್ಲಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತ್ತಾಲಿಕ್ ಸಿದ್ರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ. ಎಂಬುದನ್ನು ಮರೆಯದಿರಿ. 30 ವರ್ಷದ ಲೆಕ್ಕ ಈಗ ಕೇಳ್ತಿರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರಿಗೆ, ನೀವು 2 ಬಾರಿ ಸಿಎಂ ಆಗಿದ್ದ ವೇಳೆಯ ಲೆಕ್ಕಾ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದಿರಿ ಅದರ ಲೆಕ್ಕಾ ಕೊಡಿ ನೋಡೋಣವೆಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರು ಎಲ್ಲಾ ಕಡೆ ದುಡ್ಡು ಹೊಡೆದು, ನುಂಗಿ ನೀರು ಕುಡಿದಿರುವುದರಿಂದ ಅವರಿಗೆ ಎಲ್ಲರೂ ಭ್ರಷ್ಟರೇ ಕಾಣಿಸ್ತಾರೆ. ಇದರಿಂದ ಹೊರಬನ್ನಿ ಎಂದು ವ್ಯಂಗ್ಯವಾಡಿದರು.

ಶ್ರೀರಾಮ ಮಂದಿರ ಬಗ್ಗೆ ಒಂದೊಂದು ರೂಪಾಯಿ ಲೆಕ್ಕವಿದೆ. ಲೆಕ್ಕಾ ಬೇಕಾದವರು ವಿಎಚ್‌ಪಿ ಹೆಡ್ ಆಫಿಸ್ ಗೆ ಹೋದ್ರೆ, ಬ್ಯಾಲೆನ್ಸ್ ಶೀಟ್ ಸಮೇತ ಲೆಕ್ಕಾ ಕೊಡ್ತಾರೆ. ಶ್ರೀರಾಮನ ವಿಷಯ, ಆರ್.ಎಸ್.ಎಸ್, ವಿಶ್ವ ಹಿಂದು ಪರಿಷತ್, ಶ್ರೀರಾಮ ಸೇನೆ ವಿಷಯದಲ್ಲಿ ಇಬ್ಬರು ಸಿಎಂಗಳು ಅನಾವಶ್ಯಕವಾಗಿ ಮಾತನಾಡಬೇಡಿ. ನಿಮ್ಮ ವಿವಾದಾತ್ಮಕ ಹೇಳಿಕೆ ನೂರು ಕೋಟಿ ರಾಮನ ಭಕ್ತರಿಗೆ ಅವಮಾನ ಮಾಡಿದಂತಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಇನ್ನು ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಕೋರ್ಟ್ ತೀರ್ಪು ಎಲ್ರೂ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಪದೇ ಪದೇ ಭಾಷಾಭಿಮಾನ, ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಹಾಗೂ ಬೇಳೆ ಬೇಯಿಸಿಕೊಳ್ಳಲು ಖ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ನಾಡು, ನುಡಿ, ನೆಲ, ಜಲ ವಿಷಯದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಲು ಸಿದ್ಧ ಎಂದು ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts