ಸಚಿವ ಸ್ಥಾನ ನೀಡಿದರೆ ಬೇಡ ಅನ್ನಲ್ಲ: ಕಳಕಪ್ಪ ಬಂಡಿ ಸ್ಪಷ್ಟೋಕ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನನಗೆ ಸಚಿವ ಸ್ಥಾನ ನೀಡಿದರೆ ಬೇಡ ಅನ್ನಲ್ಲ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ತಾವೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕಳಕಪ್ಪ ಬಂಡಿ, ಸಚಿವ ಸಂಪುಟ ವಿಸ್ತರಣೆಯಾಗುತ್ತೇ ಅಂತಾ ಯಾರು ಹೇಳಿದ್ದಾರೆ. ನಾನು ನೋಡಿಲ್ಲಾ ಹಾಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿಲ್ಲಾ, ನೋಡಿ ಹೇಳುತ್ತೇನೆ ಎಂದರು.

ಇದೇ ವೇಳೆ ಸಚಿವ ಸ್ಥಾನದ ಕುರಿತು ನನಗೆ ಅಸಮಾಧಾನ ಇಲ್ಲಾ, ಸಚಿವ ಸ್ಥಾನ ನೀಡಿದ್ರೆ ಬೇಡ ಅನ್ನಲ್ಲಾ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಈಗಾಗಲೇ ಕಳಕಪ್ಪ ಬಂಡಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ.


Spread the love

LEAVE A REPLY

Please enter your comment!
Please enter your name here