ಸರ್ಕಾರಿ ನೌಕರಿ ತೊರೆದು ಸಂಘಟನೆ ಕಟ್ಟಿದ ನಾಯಕ ಮಾನ್ವಡೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಮಾರುತಿ ಮಾನ್ವಡೆಯವರು ಸಿಐಟಿಯು ಪ್ರ. ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಅವರು ಅಕ್ಷರ ದಾಸೋಹ ಮತ್ತು ಅಂಗನವಾಡಿ ಕಾರ್ಯಕರ್ತರು ರೈತ ಕಾರ್ಮಿಕರ ಬೇಡಿಕೆಗಳ ಕುರಿತು ಚಳುವಳಿಯ ಮೂಲಕ ಗುರುತಿಸಿಕೊಂಡು ಕಾರ್ಮಿಕರ ಸೌಲಭ್ಯಕ್ಕಾಗಿ ಶ್ರಮವಹಿಸಿದ್ದರು ಎಂದು ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಹೇಳಿದರು.
ಮಾರುತಿ ಮಾನ್ವಡೆಯವರ ನಿಧನ ನಿಮಿತ್ತ ಅಂಗನವಾಡಿ ಮತ್ತು ಅಕ್ಷರ ದಾಸೋಹ ಗ್ರಾಮ ಪಂಚಾಯತಿ ಸಿಬ್ಬಂದಿ, ಸದಸ್ಯರು ಪಟ್ಟಣದ ವಿಠೋಭ ಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿ ಮೇಣಬತ್ತಿ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, 1981 ರಲ್ಲಿ ಸರ್ಕಾರಿ ನೌಕರಿ ತೊರೆದು ರೈತ ಕಾರ್ಮಿಕರ ಸಂಘಟನೆ ಕಟ್ಟುವ ಮೂಲಕ ಸಾರ್ವಜನಿಕ ಜೀವನದಲ್ಲಿ ಮಾನ್ವಡೆ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರ 2015 ರಲ್ಲಿ ಭೂ ಸ್ವಾಧೀನ ಕಾಯ್ದೆ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟ ಸಂದರ್ಭದಲ್ಲಿ ನರಗುಂದದಿಂದ ಬೆಂಗಳೂರವರೆಗೆ ಪಾದಯಾತ್ರೆಯಲ್ಲಿ ಹೊರಟು ದೊಡ್ಡ ಚಳುವಳಿ ಮಾಡಿದ್ದರು. ಇಂತಹ ಮುಖಂಡರ ಆದರ್ಶಗಳನ್ನು ನಾವೆಲ್ಲ ಬೆಳೆಸಿಕೊಂಡು ನಮ್ಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎಲ್ಲರೂ ಮುಂದಾಗುವಂತೆ ಚಿಟಕಿ ಕರೆ ನೀಡಿದರು.
ಗ್ರಾಮ ಪಂಚಾಯತ್ ನೌಕರ ಸಂಘಟಣೆಯ ಜಿಲ್ಲಾ ಮುಖಂಡ ಯಲ್ಲಪ್ಪ ಪೂಜಾರ, ತಾಲೂಕಾ ಪ್ರ. ಕಾರ್ಯದರ್ಶಿ ರಮೇಶ ವಾಸನ, ಅಂಗನವಾಡಿ ನೌಕರ ಸಂಘಟನೆಯ ತಾಲೂಕಾ ಪ್ರ. ಕಾರ್ಯದರ್ಶಿ ಶಾರದಾ ರೋಣದ, ತಾಲುಕಾ ಅಂಗನವಾಡಿ ಉಪಾಧ್ಯಕ್ಷೆ ನೀಲಗಂಗಾ ಮಾದರ, ಲಕ್ಷ್ಮೀ ಗಾಯಕವಾಡ, ಸಹಕಾರ್ಯದರ್ಶಿ ಬಸಮ್ಮಗುರಿಕಾರ, ಅಕ್ಷರದಾಸೋಹ ಸಂಘಟಣೆಯ ಅಧ್ಯಕ್ಷೆ ಮಂಜುಳಾ ಮುಳ್ಳೂರಮಾತನಾಡಿದರು.
ಎಸ್.ವಿ. ಮಣ್ಣೂರಮಠ ನೌಕರ ಸಂಘಟನೆಯ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಭೂವ್ಮಣ್ಣವರ, ಬೀಬೀಜಾನ ಮುಲ್ಲಾನವರ, ಅಂಗನವಾಡಿ ನೌಕರ ಸಂಘಟಣೆಯ ಅಧ್ಯಕ್ಷೆ ಗಿರಿಜಾ ಮಾಚಕನೂರ ಹಾಗೂ ಅಂಗನವಾಡಿ ಸಿಬ್ಬಂದಿ, ಅಕ್ಷರ ದಾಸೋಹ ಸಿಬ್ಬಂದಿ, ಕಾರ್ಮಿಕರ ಸಂಘಟಣೆ ಸದಸ್ಯರು, ರೈತ ಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನಯ್ಯ ಹುಂಡೇಕಾರಮಠ, ರಮೇಶ ವಾಸನ, ಲಕ್ಷ್ಮೀ ಗಾಯಕವಾಡ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here