36.4 C
Gadag
Friday, June 2, 2023

ಸಿಡಿ ಪ್ರಕರಣ ಕೂಲಂಕಷ ತನಿಖೆ ಮಾಡಲಿ; ಗುರುನಾಥ ಉಳ್ಳಿಕಾಶಿ

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಅವರದು ಎನ್ನಲಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಒಂದು ಪ್ರಕರಣ ಹನಿಟ್ರ್ಯಾಫ್ ಪ್ರಕರಣವೋ, ಲೈಂಗಿಕ ಕಿರುಕುಳವೋ, ಬ್ಲಾಕ್ ಮೇಲ್ ಅಥವಾ ನೌಕರಿ ಕೊಡಿಸುವುದಾಗಿ ಮಾಡಿರುವುದೋ ಅನ್ನೋದನ್ನು ಸರ್ಕಾರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡೆಸಬೇಕಿದೆ ಎಂದು ಸಮತಾ ಸೇನೆಯ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.

ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯನ್ನು ಸಂತ್ರಸ್ತೆ ಎಂದು ಹೇಳಲಾಗುತ್ತಿದೆ. ಆದರೇ ಇದುವರೆಗೂ ಯಾರು ಆ ಸಂತ್ರಸ್ತೆ ಎಂದು ಗೊತ್ತಾಗುತ್ತಿಲ್ಲ. ಸಂತ್ರಸ್ತೆ ಇದುವರೆಗೂ ಹೊರಗೆ ಬಂದಿಲ್ಲ ಎಂದರು.

ಇನ್ನೂ ಯಾರು ಆ ಸಿಡಿಯನ್ನು ಬಿಡುಗಡೆ ಮಾಡಿದ್ದಾರೋ ಆ ವ್ಯಕ್ತಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಮೊದಲ ದಿನ ಸಂತ್ರಸ್ತೆಯ ಕುಟುಂಬದವರು ನನಗೆ ಸಿಡಿ ನೀಡಿದ್ದಾರೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹಿತರೊಬ್ಬರು ನೀಡಿದ್ದಾರೆ ಆ ಮಹಿಳೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂಬುವಂತ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಇದರಲ್ಲಿ ಹನಿಟ್ರ್ಯಾಫ್ ಆಗಿದೆಯೋ, ಲೈಂಗಿಕ ದೌರ್ಜನ್ಯವೋ ಅಥವಾ ಬ್ಲಾಕ್ ಮೇಲ್ ಮಾಡಲಾಗಿದೆಯೋ ಎಂಬುವುದನ್ನು ಸರ್ಕಾರ ತನಿಖೆ ನಂತರ ಬಹಿರಂಗ ಪಡೆಸಬೇಕು ಎಂದು ಸಮತಾ ಸೇನಾ ಸಂಘಟನೆ ಒತ್ತಾಯಿಸುತ್ತಿದೆ ಎಂದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts