ಸೆಲ್ಫೀ ವಿಡಿಯೋ ಮಾಡಿ ತುಂಗಭದ್ರಾ ನದಿಗೆ ಹಾರಿದ ಯುವಕ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಯಾವುದೋ ಒಂದು ಕ್ಷುಲ್ಲಕ ಕಾರಣವನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವಕನೊಬ್ಬ ಉಕ್ಕಿ ಹರಿಯುತ್ತಿರುವ ನದಿಗೆ ಹಾರಿದ ಘಟನೆ ಬುಧವಾರ ನಡೆದಿದೆ.
ನದಿಗೆ ಹಾರಿದ ಯುವಕನನ್ನು ಮುಂಡರಗಿ ಪಟ್ಟಣದ ನಿವಾಸಿ ವಿಶ್ವನಾಥ್ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸೆಲ್ಫೀ ವಿಡಿಯೋ ದಾಖಲಿಸಿರುವ ಯುವಕ ‘ನಾನು ಸಾಯಬೇಕೆಂದು ನಿರ್ಧಾರ ಮಾಡಿದ್ದೇನೆ.
ನಾನು ಸಾಕಷ್ಟು ಟೂರ್ನಮೆಂಟ್‌ಗಳಲ್ಲಿ ಆಡಿ ಬಂದಿದ್ದೇನೆ. ನನಗೆ ಜವಾಬ್ದಾರಿಯಿಲ್ಲವಾ? ನನಗೆ ಜವಾಬ್ದಾರಿ ಬರುತ್ತೋ ಬಿಡುತ್ತೋ ಎನ್ನುವದು ನನ್ನ ವೈಯಕ್ತಿಕ ವಿಷಯ. ನನಗೆ ನೀವು ಮಾಡಿರುವ ದ್ರೋಹವನ್ನು ನಾನು ಈ ಕ್ಷಣಕ್ಕೆ ಮರೆತಿದ್ದರೂ, ಎಂದಿಗೂ ಮರೆಯೋದಿಲ್ಲ. ನನ್ನ ಟೀಂನಲ್ಲಿರುವವರೂ ಮರೆಯೋದಿಲ್ಲ. ಟೀಂನಲ್ಲಿರುವ ಎಲ್ಲರೂ ನಮ್ಮವರೇ. ನನ್ನ ಮನಸ್ಸಿಗಾದ ನೋವಿನ ಕಾರಣಕ್ಕೆ ನಾನು ಸಾಯುತ್ತಿದ್ದೇನೆ’ ಎಂದು ರೆಕಾರ್ಡ್ ಮಾಡಿದ ಬಳಿಕ ಕೊರ್ಲಹಳ್ಳಿ ಗ್ರಾಮದ ಬಳಿಯಿರುವ ತುಂಗಭದ್ರಾ ಸೇತುವೆಯ ಮೇಲಿಂದ ನದಿಗೆ ಹಾರಿದ್ದು, ನೋಡನೋಡುತ್ತಿದ್ದಂತೆ ಯುವಕ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಹೋದ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here