21.4 C
Gadag
Wednesday, September 27, 2023

ಸ್ಮಶಾನ ರಸ್ತೆ ಅಭಿವೃದ್ಧಿಗೆ ಆಗ್ರಹ 

Spread the love

ವಿಜಯಸಾಕ್ಷಿ ಸುದ್ದಿ ನರೇಗಲ್ಲ
ಕುಡಒಕ್ಕಲಿಗೆ ಸಮುದಾಯದ ಸ್ಮಶಾನಕ್ಕೆ ಹೋಗುವ ರಸ್ತೆಯು, ಚರಂಡಿ ನೀರಿನಿಂದ ಹದಗೆಟ್ಟು ಸ್ಮಶಾನಕ್ಕೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಗುರುವಾರ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಪ.ಪಂ ಕಾರ್ಯಾಲಯದ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪ.ಪಂ ಮುಖ್ಯಾಧಿಕಾರಿ, ಮಹೇಶ ನಿಡೇಶೇಶಿ, ಪಿಎಸ್‌ಐ ಬಸವರಾಜ ಕೊಳ್ಳಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರನ್ನು ಸಮಾಧಾನಿಸಿ, ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಒಂದು ವಾರ ಸಮಯ ನೀಡಿ. ಈಗಾಗಲೇ ಈ ರಸ್ತೆ ಸುಧಾರಣೆ ಪಡಿಸುವುದಕ್ಕೆ ೧೪ನೇ ಯೋಜನೆಯಡಿಯಲ್ಲಿ 5 ಲಕ್ಷ 90 ಸಾವಿರ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಈಗ ವಿ.ಪ ಚುಣಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಜಿಲ್ಲಾ ಯೋಜನಾ ನಿರ್ದೇಶಕರೊಂದಿಗೆ ಮಾತನಾಡಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಚುಣಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದ್ದಾರೆ. ಒಂದು ವಾರದೊಳಗೆ ರಸ್ತೆ ದುರಸ್ತಿಗೆ ಚಾಲನೆ ಮಾಡಿ 15 ದಿನದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಲಿಖಿತ ಭರವಸೆ ನೀಡಿದರು.
ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ೧೫ ದಿನಗಳಲ್ಲಿ ಈ ರಸ್ತೆ ದುರಸ್ತಿ ಕಾರ್ಯವಾಗಲಿಲ್ಲ ಅಂದರೆ, ಮತ್ತೆ ಪಟ್ಟಣದಲ್ಲಿ ಯಾವುದೇ ಸಮಾಜದ ವ್ಯಕ್ತಿಗಳು ಸತ್ತರೆ ಅವರ ಶವಗಳನ್ನು ನೇರವಾಗಿ ನಿಮ್ಮ ಕಾರ್ಯಾಲಯಕ್ಕೆ ತಂದು ಮಣ್ಣು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶೇಖಪ್ಪ ಲಕ್ಕನಗೌಡ್ರ, ಚಂದ್ರು ಹೊನವಾಡ, ಶಶಿಧರ ಓದಿಸೋಮಠ, ಬಾಳಪ್ಪ ಸೋಮಗೊಂಡ, ಶಿವಪ್ಪ ಧರ್ಮಾಯತ, ಶರಣಪ್ಪ ಗಂಗರಗೊಂಡ, ರಮೇಶ ಹತ್ತಿಕಟಗಿ, ಆನಂದ ಕಳಕೊಣ್ಣವರ, ವೀರೇಶ ಪಿಡಗೊಂಡ, ಶಶಿಧರ ಕಳಕೊಣ್ಣವರ, ಈರಪ್ಪ ಹತ್ತಿಕಟಗಿ, ಶರಣಪ್ಪ ಗಚ್ಚಿನ, ವಿಜಯ ಲಕ್ಕನಗೌಡ್ರ, ಮಾಂತೇಶ ಸೋಮಗೊಂಡ, ಎಂ.ಕೆ. ಗಂಗರಗೊಂಡ, ಕಳಕಪ್ಪ ಧರ್ಮಾಯತ, ಪ್ರಕಾಶ ಪಿಡಗೊಂಡ, ಯಲ್ಲಪ್ಪ ಜುಟ್ಲದ, ಕನ್ನಪ್ಪ ಪಿಡಗೊಂಡ ಸೇರಿದಂತೆ ಇತರರಿದ್ದರು.
 
 
 


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!