20.9 C
Gadag
Monday, October 2, 2023

ಹತಾಶಾಭಾವದಲ್ಲಿ ವಿಪಕ್ಷಗಳಿವೆ: ಸಿ.ಟಿ. ರವಿ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿ ವಿಪಕ್ಷಗಳು ಹತಾಶಾಭಾವದಿಂದ ಮಾತನಾಡುತ್ತಿವೆ. ಬಿಜೆಪಿ ಅಂಬೇಡ್ಕರ್ ವಿರೋಧಿ, ರೈತ ವಿರೋಧಿ ಎಂದು ದಲ್ಲಾಳಿಗಳ ಪರ ಇರುವ ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಧಾನಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು ಟ್ರೆಂಡ್ ಸೆಟ್ ಮಾಡುವ ಚುನಾವಣೆ ಅಲ್ಲ, ಮೈಂಡ್‌ಸೆಟ್ ಮಾಡುವ ಚುನಾವಣೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಕಾಂಗ್ರೆಸ್‌ಗೆ ಇತ್ತಿಚೆಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು, ಆದರೆ ಭಾರತ, ಕರ್ನಾಟಕದಲ್ಲಿ ಅಲ್ಲ,ಪಾಕಿಸ್ತಾನದಲ್ಲಿ ಗೆಲ್ಲಬಹುದು ಎಂದು ಲೇವಡಿ ಮಾಡಿದರು.

ಮೋದಿಯವರು ಮಾಡಿದ ಪರಿವರ್ತನೆ ಯುಗಕ್ಕೆ ಈ ಚುನಾವಣೆ ನಾಂದಿ ಹಾಕುತ್ತದೆ. ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!