22.7 C
Gadag
Sunday, December 10, 2023

ಹಳೆ ನೋಟುಗಳ ಎಕ್ಸಚೆಂಜ್ ಜಾಲ ಪತ್ತೆ: ಡಾಕ್ಟರ್, ಸಂಘಟಕರ ಬಂಧನ!

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ನೋಟು ಅಮಾನ್ಯದಿಂದ ಮೌಲ್ಯ ಕಳೆದುಕೊಂಡಿರುವ 5 ನೂರು ಮತ್ತು ಸಾವಿರ ರೂಪಾಯಿಗಳ ಎಕ್ಸಚೆಂಜ್ ಮಾಡುತ್ತಿದ್ದ ಜಾಲವೊಂದು ಕೊಪ್ಪಳದಲ್ಲಿ ಸಿಕ್ಕು ಬಿದ್ದಿದೆ. ಮೈಸೂರು ಮೂಲದ ಇಬ್ಬರು ಹಾಗೂ ಕೊಪ್ಪಳ ಜಿಲ್ಲೆಯ ಆರ್ ಎಂಪಿ ವೈದ್ಯ ಸೇರಿದಂತೆ ಇತರೆ ೫ ಜನರನ್ನು ಪೋಲಿಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯೇ ಎಲ್ಲ ನೋಟುಗಳನ್ನು ಸರಕಾರ ವಾಪಸ್ ಪಡೆದಿತ್ತು. ಇದರ ಚಲಾವಣೆಯನ್ನು ರದ್ದು ಮಾಡಿತ್ತು. ಆದರೆ ಈಗಲೂ ಕೆಲವೆಡೆ ಅಕ್ರಮವಾಗಿ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ಜಾಲಗಳು ಸಕ್ರೀಯವಾಗಿವೆ.

ರಾಜ್ಯದ ವಿವಿಧೆಡೆ ಇಂತಹ ಜಾಲಗಳು ಸಿಕ್ಕಿ ಬೀಳುತ್ತಲೇ ಇವೆ. ಕೊಪ್ಪಳದ ಖಾಸಗಿ ಲಾಡ್ಜವೊಂದರಲ್ಲಿ ತಂಗಿದ್ದ ಗುಂಡ್ಲುಪೇಟೆಯ ಮಂಜುನಾಥ, ಬೆಂಗಳೂರಿನ ಧನಲಕ್ಷ್ಮೀ ಸೇರಿದಂತೆ ಕೊಪ್ಪಳದ ಅಸೀಪ್ ಅಲಿ, ರಫಿಕ್, ಟಿಕ್ಕೆ ನಾಯಕ, ಹಿರೇಬಗನಾಳದ ಆರ್ ಎಂಪಿ ವೈದ್ಯ ವೀರೇಶ ಗಟ್ಟಿ ಇವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಹನುಮಂತ ಎನ್ನುವ ವ್ಯಕ್ತಿ ಪರಾರಿಯಾಗಿದ್ದಾನೆ.

ಬಂಧಿತರಿಂದ 65ಸಾವಿರ ಮೌಲ್ಯದ ಹಳೆಯ 5 ನೂರು ಮತ್ತು ಸಾವಿರ ರೂಪಾಯಿಯ 130 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ನೋಟುಗಳನ್ನು ಪೂಜೆ ಮಾಡಿದ್ರೆ ಹೊಸ ನೋಟುಗಳಾಗುತ್ತವೆ, ದ್ವಿಗುಣವಾಗುತ್ತವೆ ಎಂದು ನಂಬಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಕನ್ನಡಪರ ಸಂಘಟನೆಯೊಂದಕ್ಕೆ ಸೇರಿದವರು ಎಂದು ಹೇಳಲಾಗಿದೆ. ಕೊಪ್ಪಳ ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಪೋಲಿಸರ ತಂಡ ಕಾರ್ಯಾಚರಣೆ ಮಾಡಿ ಬಂಧಿತರಿಂದ 6 ಮೊಬೈಲ್, ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು. ಆರೋಪಿತರನ್ನು ನ್ಯಾಯಾದೀಶರ ಮುಂದೆ ಹಾಜರುವಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಸ್ಟಿಂಗ್ ಆಪರೇಷನ್ ನಡೆಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದ್ದು ಹೆಚ್ಚಿನ ತನಿಖೆ ನಡೆದರೆ ಈ ಜಾಲದ ಆಳ ಅಗಲ ತಿಳಿಯಲಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts