ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025ರ 28ನೇ ಆವೃತ್ತಿಗೆ ಇಂದು ತೆರೆ ಬಿದ್ದಿದೆ.
ಮಾದವಾರ BIEC ಆವರಣದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ಟೆಕ್ ಶೃಂಗಸಭೆ ಅದ್ಧೂರಿಯಾಗಿ ತೆರೆ ಕಂಡಿದೆ. ಶೃಂಗಸಭೆಯಲ್ಲಿ 60 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿದ್ದರು ಅನ್ನೋದು ಮತ್ತೊಂದು ವಿಶೇಷ.
ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇಂದು ಪ್ರಮುಖ ಕಾರ್ಯಕ್ರಮವಾಗಿ ಪ್ಯೂಚರ್ ಮೇಕರ್ಸ್ ಕಾನ್ಕ್ಲೈವ್ನಲ್ಲಿ 10 ಸಾವಿರ ಜನ ಸ್ಟಾರ್ಟ್ ಅಪ್ ಫೌಂಡರ್ಸ್ಗೆ ಸಾನಿಯಾ ಮಿರ್ಜಾ, ಶುಭಾಂಶು ಶುಕ್ಲಾ, ರಿಚಾ ಘೋಷ್ ಸೇರಿದಂತೆ ಹಲವರು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದು, ವಿಶೇಷವಾಗಿತ್ತು.
ಇಂದು ಮೂರನೇ ದಿನದ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಡೀಪ್ ಟೆಕ್ ಪ್ರಾಜೆಕ್ಟ್ ಸಲುವಾಗಿ ಕರ್ನಾಟಕದಲ್ಲಿ 786.43 ಕೋಟಿ ಹೂಡಿಕೆ ಆಗಿದ್ದು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಸಾಧನೆ ಆಗಿದೆ. ಬೆಂಗಳೂರು ಟೆಕ್ ಸಮ್ಮಿಟ್ನಿಂದ ಕರ್ನಾಟಕದಲ್ಲಿ ಈ ಸಾಧನೆ ಆಗಿದೆ ಎಂದು ತಿಳಿಸಿದರು.


