ವಿಜಯಸಾಕ್ಷಿ ಸುದ್ದಿ, ಗದಗ
Advertisement
ಗ್ರಾಮ ಪಂಚಾಯತಿ ವತಿಯಿಂದ ಕೈಗೊಂಡಿದ್ದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಯುವಕನ ಮೇಲೆ, ಬಿಡಿಸಲು ಬಂದ ಅವನ ತಾಯಿಯ ಮೇಲೂ ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ಗ್ರಾಮದ ನೀಲಪ್ಪ ಹನಮಂತಪ್ಪ ಕಟಗಿ ಎಂಬಾತ ಮಾಹಿತಿ ಕೇಳಿದ್ದ. ಇದರಿಂದ ಸಿಟ್ಟಾದ ಗ್ರಾಮ ಪಂಚಾಯತಿ ಸದಸ್ಯ ಚನ್ನಬಸಪ್ಪ ಬಸಪ್ಪ ಪತ್ತಾರ ಎಂಬುವವರು ತನ್ನ ಸಹಚರರಾದ ಮುತ್ತಪ್ಪ ವೆಂಕಣ್ಣ ಜಿನಗಿ, ಶಿವಪ್ಪ ದೇವಪ್ಪ ಕೋಳಿವಾಡ ಹಾಗೂ ಮುತ್ತಣ್ಣ ಉಡಚಪ್ಪ ಹಡಗಲಿ ಎಂಬುವವರನ್ನು ಕರೆದುಕೊಂಡು ಫಿರ್ಯಾದಿ ನೀಲಪ್ಪ ಹನಮಂತಪ್ಪ ಕಟಗಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ನೀಲಪ್ಪನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.