ಕೊರೊನಾ ಟೈಂ ನಲ್ಲಿ ಪೊಲೀಸಪ್ಪನ ಟಫ್ ರೂಲ್ಸ್..!! ರೈತನಿಗೆ ನೀಡಿದ ಈ ಕಿರುಕುಳಕ್ಕೆ ರಾಜ್ಯವೇ ಆಕ್ರೋಶ!

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ಕೊರೊನಾ ಸಂದರ್ಭದಲ್ಲಿ ರೈತರಿಗೆ ತಮ್ಮ ಕೆಲಸ ಮಾಡಕೊಳ್ಳಲು ಸರ್ಕಾರವೇ ಅನುಮತಿ ನೀಡಿದೆ. ಆದರೆ, ಹಲವೆಡೆ ಮಾತ್ರ ಪೊಲೀಸರ ಕಾಟ ರೈತರನ್ನೂ ಬಿಡುತ್ತಿಲ್ಲ. ರೈತರೊಬ್ಬರಿಗೆ ಇಲ್ಲೊಬ್ಬ ಪೊಲೀಸಪ್ಪ ಮಾಡಿರುವ ಕಿರುಕುಳ ಕಂಡು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಮೀನಿಗೆ ತೆರಳುತ್ತಿದ್ದ ರೈತನ ಬೈಕ್ ಗೆ ಸಬ್ ಇನ್ಸಪೆಕ್ಟರ್ ಒಬ್ಬರು ಎಮಿಷನ್ ಟೆಸ್ಟ್ ಕೇಸ್ ಹಾಕಿದ್ದಾರೆ. ಜಮೀನಿನ ಲೀಸ್ ಡಾಕ್ಯುಮೆಂಟ್ ತೋರಿಸಿದ್ದರೂ ಪೊಲೀಸರು ರೈತನ ಬೈಕ್ ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಬೆಳಿಗ್ಗೆ 6 ರಿಂದ 10ರ ವರೆಗೆ ಮಾತ್ರ ಓಡಾಟ ನಡೆಸಬೇಕು ಎಂದು ರೈತರಿಗೆ ಈ ಪೋಲೀಸ್ ಧಮ್ಕಿ ಹಾಕಿದ್ದಾರೆ.

ನಗರ ನಿವಾಸಿಯಾಗಿರುವ ಪ್ರಶಾಂತ್ ಎಂಬುವವರಿಗೆ ಪೊಲೀಸಪ್ಪ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಜಮೀನಿನಲ್ಲಿ ಬಾಳೆ ಗಿಡ ಹಾಳಾಗುತ್ತಿದೆ ಬಿಡಿ ಸ್ವಾಮಿ ಎಂದರೂ ಪಿಎಸ್ ಐ ಮಾತ್ರ ತನ್ನ ಮೊಂಡಾಟ ಮೆರೆದಿದ್ದಾರೆ. ಹುಲ್ಲಳ್ಳಿ ಸಮೀಪದ ಹರದನಹಳ್ಳಿ, ಕಣ್ಣೇನೂರಿನಲ್ಲಿ ಜಮೀನನ್ನು ರೈತ ಪ್ರಶಾಂತ್ ಲೀಸ್ ಪಡೆದಿದ್ದರು. ಹೀಗಾಗಿ ಅವರು ಜಯಪುರ ಮಾರ್ಗವಾಗಿ ಜಮೀನಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದರು.

ಜಯಪುರ ಸಬ್ ಇನ್ಸ್ಪೆಕ್ಟರ್ ರೈತನಿಗೆ ಕಿರುಕುಳ ನೀಡಿದ ಅಧಿಕಾರಿ. ಬೈಕ್ ವಶಕ್ಕೆ ಪಡೆದ ಒಂದು ದಿನದ ಬಳಿಕ ಎಮಿಷನ್ ಟೆಸ್ಟ್ ಇಲ್ಲ ಎಂದು ರೂ. 1 ಸಾವಿರ ದಂಡ ವಿಧಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೈತರಿಗೆ ಈ ರೀತಿ ಕಿರುಕುಳ ನೀಡಿದ್ದಕ್ಕೆ ಸದ್ಯ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here