ಗೂಡ್ಸ್ ಲಾರಿ ಡಿಕ್ಕಿ: ನಿವೃತ್ತ ಪ್ರಾಂಶುಪಾಲರ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕುಟುಂಬ ಸಮೇತ ಪ್ರವಾಸಕ್ಕೆ ಹೊರಟಿದ್ದ ಗದಗ ಅಕ್ಕಿ ಕುಟುಂಬದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ, ಪ್ರತಿಷ್ಠಿತ ವಿಜಯ ಕಲಾ ಮಂದಿರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಅಕ್ಕಿ (83) ಅವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಅಂಕೋಲಾ ಸಮೀಪ ನಡೆದಿದೆ.

ಅಕ್ಕಿ ಅವರು ಕುಟುಂಬ ಸಮೇತ ಕಾರವಾರ ಹಾಗೂ ದಕ್ಷಿಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ದೇವಸ್ಥಾನಗಳಿಗೆ ಭೇಟಿ ಕೊಡಲು ಹೊರಟಿದ್ದರು. ಪತ್ನಿ, ಮಕ್ಕಳು, ಮೊಮ್ಮಕ್ಕಳ ಸಹಿತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು‌. ಶುಕ್ರವಾರ ಮಧ್ಯಾಹ್ನ ಅಂಕೋಲಾದ ಬಳಿ ವಸಂತ ಅಕ್ಕಿಯವರಿದ್ದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಕಾರಿನಲ್ಲಿ ಮುಂದುಗಡೆ ಕುಳತಿದ್ದ ವಸಂತ ಅಕ್ಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪ್ರಕಾಶ ಅಕ್ಕಿ, ಅಶೋಕ್ ಅಕ್ಕಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತೇಜಸ್ ಅಕ್ಕಿ ಮತ್ತು ವಿಕಾಸ್ ಅಕ್ಕಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾರ್ಥಿವ ಶರೀರವನ್ನು ಗದಗಕ್ಕೆ ತರಲಾಗುತ್ತಿದೆ. ವಸಂತ ಅಕ್ಕಿ ಅವರು ಗದಗದ ಪಂಚಾಕ್ಷರಿ ನಗರದಲ್ಲಿ ವಾಸವಾಗಿದ್ದರು. ಇವರ ಪುತ್ರ ವಿನಯ ಅಕ್ಕಿ ನಗರದಲ್ಲಿ ಹಲವು ಜಿಮ್‌ಗಳನ್ನು ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here