ಚಾಕು ತೋರಿಸಿ ಹಣ ಕೀಳಲು ಯತ್ನ; ಜನರ ನೋಡಿ ಕಾಲ್ಕಿತ್ತ ಖದೀಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ರಸ್ತೆ ಮೇಲೆ ನಡೆದುಕೊಂಡು ಹೊರಟಿದ್ದ ವ್ಯಕ್ತಿಗೆ ಚಾಕು ತೋರಿಸಿ ಹಣ ಕೀಳಲು ಯತ್ನಿಸಿದ ಖದೀಮ ಜನರನ್ನು ಕಂಡು ಓಡಿಹೋದ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಮೋದಿನಸಾಬ ಕಾಶಿಮಸಾಬ ಮುಲ್ಲಾ ಎಂಬುವವರು ವೀರೇಶ್ವರ ಲೈಬ್ರರಿ ಹತ್ತಿರ ಸಾಲ ಓಣಿ ಕಡೆಗೆ ಹೊರಟಿದ್ದಾಗ ಉಮೇಶ ಬಸವರಾಜ ಕವಲೂರು ಎಂಬಾತ ಚಾಕು ತೋರಿಸಿ ಕಿಸೆಗೆ ಕೈಹಾಕಿದ್ದು ಗಾಬರಿಗೊಂಡ ಮೋದಿನಸಾಬ್ ಚೀರಲಾರಂಭಿಸಿದ್ದರಿಂದ ಜನರು ಸೇರಿದ್ದು, ಜನರನ್ನು ನೋಡುತ್ತಲೇ ಉಮೇಶ ಅಲ್ಲಿ ಕಾಲ್ಕಿತ್ತಿದ್ದಾನೆ.

ಈ ಕುರಿತು ಮೋದಿನಸಾಬ ಮುಲ್ಲಾ ಗದಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಾರಿಯಾಗಿದ್ದ ಖದೀಮ ಉಮೇಶ್ ಕವಲೂರನನ್ನು ಪೊಲೀಸರು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here