ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಸೋಂಕು ಇಂದು ಕೂಡ ತನ್ನ ದಾಖಲೆ ಮುರಿದು ಶರವೇಗದಲ್ಲಿ ಸಾಗಿದೆ. ಇಂದು ಬರೋಬ್ಬರಿ 40,990 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 271 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 19,353 ಜನರಲ್ಲಿ ಸೋಂಕು ಬಂದಿದೆ. 21 ವರ್ಷದ ಯುವಕ ಸೇರಿದಂತೆ 162 ಜನ ಬಲಿಯಾಗಿದ್ದಾರೆ. ಇಂದು ಮೈಸೂರಿನಲ್ಲಿ 3,529 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,05,068ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,64,131ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,43,250 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇಲ್ಲಿಯವರೆಗೆ 15,794 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ರಾಜ್ಯದಲ್ಲಿ ತುಮಕೂರು 2,308, ಕಲಬುರಗಿ 1,407, ಮಂಡ್ಯ 1,235, ಬಳ್ಳಾರಿ 1,163, ಕೊಪ್ಪಳ 1019 ದಕ್ಷಿಣ ಕನ್ನಡ 933, ಚಿಕ್ಕಬಳ್ಳಾಪುರದ 820, ಹಾಸನ 790, ಉತ್ತರ ಕನ್ನಡ 687 ಮತ್ತು ಉಡುಪಿಯ 670 ಜನರಿಗೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.