ವಿಜಯಸಾಕ್ಷಿ ಸುದ್ದಿ, ಮುಳಗುಂದ
ಸಮೀಪದ ನೀಲಗುಂದ ಗ್ರಾಮದ ದ್ಯಾಮವ್ವನ ದೇವಸ್ಥಾನದ ಮುಂದಿರುವ ಸಾರ್ವಜನಿಕ ಬಯಲು ಜಾಗೆಯಲ್ಲಿ ಇಸ್ಟೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮುಳಗುಂದ ಠಾಣೆಯ ಪೊಲೀಸರು ದಾಳಿ ನಡೆಸಿ, 4,200 ರೂ. ನಗದು ಸೇರಿದಂತೆ ಎಂಟು ಜನರನ್ನು ಬಂಧಸಿ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ ಸರ್ಕಾರಿ ಕಟ್ಟಡದಲ್ಲಿ ಫಂಡ್ ರೀತಿಯಲ್ಲಿ ಜೂಜಾಟ: ಬ್ಯಾಂಕ್ ನೌಕರ, ಉದ್ಯಮಿಗಳು ಸೇರಿದಂತೆ ಒಂಬತ್ತು ಜನರ ಬಂಧನ
ನೀಲಗುಂದ ಗ್ರಾಮದ ಬಸಪ್ಪ ಚನ್ನಪ್ಪ ಅರಳಿ, ಶಿವಾನಂದ ಶಿವಪ್ಪ ನಾಯ್ಕರ, ರಾಮಪ್ಪ ಯಲ್ಲಪ್ಪ ಗೋಕಾವಿ, ಸೋಮರೆಡ್ಡಿ ಮಲ್ಲಪ್ಪ ರಾಮರೆಡ್ಡಿ, ರಮೇಶಪ್ಪ ಹನಮಪ್ಪ ಕಮ್ಮಾರ, ದ್ಯಾಮಣ್ಣ ಪಕ್ಕೀರೇಶ ಚಿಕ್ಕಗಸಿ, ಬಸಪ್ಪ ಸೋಮಪ್ಪ ತಿರ್ಲಾಪೂರ ಹಾಗೂ ಈರಣ್ಣ ರಾಚಪ್ಪ ಅಂಗಡಿ ಎಂಬ ಎಂಟು ಜನರ ಮೇಲೆ ದೂರು ದಾಖಲಿಸಿಕೊಂಡಿರುವ
ಮುಳಗುಂದ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.