ನಾಗರಹೊಳೆ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಪ್ರತ್ಯಕ್ಷ

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ನಾಗರಹೊಳೆ ಅಭಯಾರಣ್ಯದಲ್ಲಿ ಬ್ಲಾಕ್ ಪ್ಯಾಂಥರ್ ಕಾಣಿಸಿಕೊಂಡಿದೆ. ನಿನ್ನೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಈ ಕರಿ ಚಿರತೆ ಕಾಣಿಸಿಕೊಂಡಿದ್ದು, ಇದನ್ನು ಕಂಡು ಸಫಾರಿಗೆ ತೆರಳಿದ್ದವರು ಫುಲ್ ಖುಷಿಯಾಗಿ ಅದರ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಪ್ರವಾಸಿಗರನ್ನು ನೋಡುತ್ತಲೇ ಚಿರತೆ ಮರದ ಕೊಂಬೆಯ ಮೇಲೇರಿ ಕುಳಿತುಕೊಂಡಿದೆ.
ದಟ್ಟವಾದ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುವ ಇದು ಮನುಷ್ಯರ ಸಂಪರ್ಕಕ್ಕೆ ಬರುವುದು ಬಲು ವಿರಳ. ಇದು ಹೆಚ್ಚಾಗಿ ಕಿನ್ಯಾ, ಭಾರತ, ಶ್ರೀಲಂಕಾ, ನೇಪಾಳ, ಮಲೇಷಿಯಾ, ಜಾವಾ ಅರಣ್ಯಪ್ರದೇಶದಲ್ಲಿ ಕಂಡುಬರುತ್ತದೆ.

ಲಾಕ್ಡೌನ್ ಬಳಿಕ ಸಫಾರಿ ತೆರಳಿದವರಿಗೆ ಸಾಲು ಸಾಲು ಪ್ರಾಣಿಗಳ ದರ್ಶನವಾಗುತ್ತಿವೆ.


Spread the love

LEAVE A REPLY

Please enter your comment!
Please enter your name here