HomeGadag Newsಬಂಧನ ಭೀತಿ; ನಗರಸಭೆ ಆಯುಕ್ತ ರಮೇಶ್ ಜಾಧವ್ ನಾಪತ್ತೆ! ಪ್ರಭಾರ ಹುದ್ದೆಗೆ ರಮೇಶ್ ವಟಗಲ್ಲ ನೇಮಕ

ಬಂಧನ ಭೀತಿ; ನಗರಸಭೆ ಆಯುಕ್ತ ರಮೇಶ್ ಜಾಧವ್ ನಾಪತ್ತೆ! ಪ್ರಭಾರ ಹುದ್ದೆಗೆ ರಮೇಶ್ ವಟಗಲ್ಲ ನೇಮಕ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟ ಮಾಡಿದ ಬಿಲ್ ಮಾಡಿಕೊಡಲು ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ನಾಪತ್ತೆಯಾಗಿದ್ದಾರೆ. ಸೋಮವಾರ ಮುಂಜಾನೆ ನಗರಸಭೆ ಕಛೇರಿಗೆ ಬಂದ ಅರ್ಧಗಂಟೆಯಲ್ಲಿಯೇ ವಾಪಾಸು ಹೋದವರು ಮಂಗಳವಾರ ಸಂಜೆಯವರೆಗೂ ಸುಳಿದಿಲ್ಲವಂತೆ.

ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಬಹುತೇಕ ಎಸಿಬಿ ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ರಮೇಶ್ ಜಾಧವ್ ಅವರನ್ನು ಸತತ ಎರಡು ದಿನಗಳ ಕಾಲ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕಳೆದ ಬುಧವಾರ ಸಂಜೆ 25 ಸಾವಿರ ಲಂಚ ಪಡೆಯುತ್ತಿದ್ದಾಗ ಎಇಇ ವರ್ಧಮಾನ್ ಹುದ್ದಾರ್ ಅವರನ್ನು ಬಂಧಿಸಲಾಗಿತ್ತು. ಮರುದಿನ ರಾತ್ರಿ‌ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಅನಿಲಕುಮಾರ್ ಮುದ್ದಾ  ಅವರನ್ನು 10 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ ಲಂಚ ಸ್ವೀಕಾರ ಪ್ರಕರಣ, ಅನಿಲ್ ಮುದ್ದಾ ಅಂದರ್; ಎಸಿಬಿಯಿಂದ ಮುಂದುವರೆದ ರಮೇಶ್ ಜಾಧವ್ ವಿಚಾರಣೆ

ಮೂರನೇ ಆರೋಪಿ ಆಗಿರುವ ರಮೇಶ್ ಜಾಧವ್ ಅವರು 1.50 ರೂ. ಲಕ್ಷ ಹಣ ಕೇಳಿದ ಆರೋಪ ಇದೆ. ಈ ಆರೋಪದ ಹಿನ್ನೆಲೆಯಲ್ಲಿ ದ್ವನಿ ಹಾಗೂ ಚಿತ್ರಣದ ಖಚಿತತೆ ಕುರಿತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ ಅದರ ವರದಿ ಇನ್ನೂ ಬಂದಿಲ್ಲ. ಇದರ ಮಧ್ಯೆ ರಮೇಶ್ ಜಾಧವ್ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇನ್ನೂ ಜಾಮೀನು ‌ಸಿಕ್ಕಿಲ್ಲ ಎನ್ನಲಾಗಿದೆ.

ಹೀಗಾಗಿಯೇ ರಮೇಶ್ ಜಾಧವ್ ಅವರು ನಾಪತ್ತೆಯಾಗಿದ್ದರೆ ಎಂದು ಹೇಳಲಾಗುತ್ತದೆ.
ನಗರಸಭೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಕ್ಕೆ ಡಿಸಿ ಸುಂದರೇಶ್ ಬಾಬು ಅವರು ಮತ್ತೊಬ್ಬ ಅಧಿಕಾರಿಗೆ ನಗರಸಭೆಗೆ ಪ್ರಭಾರ ಆಯುಕ್ತರನ್ನು ನೇಮಿಸಿ‌ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ರಮೇಶ್ ವಟಗಲ್ಲ ಅವರಿಗೆ ನಗರಸಭೆಯ ಪ್ರಭಾರ ಹುದ್ದೆಗೆ ‌ನೇಮಿಸಿ ಸಂಜೆ ಆದೇಶ ಹೊರಡಿಸಲಾಗಿದೆ. ರಮೇಶ್ ಜಾಧವ್ ಅವರು ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ನಗರಸಭೆಯ ದೈನಂದಿನ ಚಟುವಟಿಕೆಗೆ ತೊಂದರೆ ಆಗಿದ್ದನ್ನು ಮನಗಂಡು ಈ ಆದೇಶ ಮಾಡಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!