ವಿಜಯಸಾಕ್ಷಿ ಸುದ್ದಿ, ಗದಗ
ನಿತ್ಯವೂ ದುಡಿದು ಬದುಕೋ ಜನರೆಲ್ಲಾ ಒಂದಾಗಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಬಂಧಿಸಿದ್ದಾರೆ.
ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಬನ್ನಿಕೊಪ್ಪ ರಸ್ತೆಯಲ್ಲಿ ಇವರೆಲ್ಲರೂ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇಲೆ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರು ಪೊಲೀಸರ ಪ್ರಕಾರ ಡ್ರೈವರ್ ಕೆಲಸ ಮಾಡೋ ಈಶಪ್ಪ ಗೂಳಪ್ಪ ಭಾವಿ, ಗೌಂಡಿ ಕೆಲಸಗಾರ ಭವಾನಿಸಾಬ್ ಅಲ್ಲಾಸಾಬ್ ಹೊಸಳ್ಳಿ, ಕೂಲಿ ಕೆಲಸ ಮಾಡುವಾತ ಶರೀಫಸಾಬ್ ಅಲ್ಲಾಸಾಬ್ ನದಾಫ್, ಕೂಲಿ ಕೆಲಸ ಮಾಡುವಾತ ಬಸವರಾಜ್ ತೀರಬಸಪ್ಪ ಕಟಗಿ, ಗೌಂಡಿ ಕೆಲಸಗಾರ ಬಾಳನಗೌಡ್ ಹನಮಂತಗೌಡ್ ಮರಿಗೌಡ್ರ, ಹಮಾಲಿ ಮಾಡುವ
ರಮೇಶ್ ಬಸಪ್ಪ ಕೊಳ್ಳಿ, ಕೂಲಿ ಕೆಲಸ ಮಾಡುವ ಕುಬೇರಪ್ಪ ಫಕ್ಕೀರಪ್ಪ ದೇಸುಣಕಿ ಎನ್ನಲಾಗಿದೆ.
ಬಂಧಿತರಿಂದ 4000 ಸಾವಿರ ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿ ಠಾಣೆಯಲ್ಲಿ ಜೂಜಾಟದ ಪ್ರಕರಣ ಮಾತ್ರ ದಾಖಲು ಮಾಡಿಕೊಳ್ಳಲಾಗಿದೆ. ಇಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗರಲಿಕ್ಕಿಲ್ಲ.