ವಿಜಯಸಾಕ್ಷಿ ಸುದ್ದಿ, ರಟ್ಟೀಹಳ್ಳಿ:
ಸುಧೀರ್ಘ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ತಾಲ್ಲೂಕಿನ ಚಿಕ್ಕಯಡಚಿ ಗ್ರಾಮದ ಬಸವನಗೌಡ ಗುಬ್ಬೇರ ಅವರನ್ನು ಪಟ್ಟಣದ ಭಜರಂಗದಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಮೇಳದ ಜೊತೆಗೆ ಪಟಾಕಿ ಸಿಡಿಸಿ ಹೂವಿನ ಸುರಿಮಳೆಗೈದು ನಿವೃತ್ತ ಯೋಧನ ಮೆರವಣಿಗೆ ಮಾಡಲಾಯಿತು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು. ಬಿ. ಬಣಕಾರ ಯೋಧನಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಭಜರಂಗದಳದ ಕಾರ್ಯಕರ್ತರಾದ ಮೃತ್ಯುಂಜಯ ಬೆಣ್ಣಿ, ಆಕಾಶ್ ಹುಲ್ಲತ್ತಿ, ರಾಜು ಕುಪ್ಪೆಲೂರ, ಸಿದ್ದು ಪಾಟೀಲ್, ನಾಗಪ್ಪ ದೊಡ್ಡಗೌಡ್ರ, ರಾಜು ಕೋಣ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಚನ್ನಗೌಡ್ರ, ರುದ್ರೇಶ್ ಬೆಣ್ಣಿ, ವೀರನಗೌಡ ಮಕರಿ, ಹನುಮಂತಪ್ಪ ಬಳಿಗಾರ, ಗೋಪಾಲ್ ಮಡಿವಾಳರ, ಶ್ರೀನಿವಾಸ್ ಭೈರೋಜಿಯವರ್, ದೇವರಾಜ್ ನಾಗಣ್ಣನವರ್ ಇದ್ದರು.