HomeGadag Newsಮಂಗಳವಾರ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು; 92 ಜನರು ಗುಣಮುಖ

ಮಂಗಳವಾರ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು; 92 ಜನರು ಗುಣಮುಖ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ. 22 ರಂದು 120 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

120 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8567 ಕ್ಕೇರಿದೆ. ಇಂದು 92 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7570 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 872 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 125 ಜನರು ಮೃತಪಟ್ಟಿದ್ದಾರೆ.

ಗದಗ-65, ಮುಂಡರಗಿ-14, ನರಗುಂದ-06, ರೋಣ-19, ಶಿರಹಟ್ಟಿ-03, ಹೊರ ಜಿಲ್ಲೆಯ 13 ಸೇರಿದಂತೆ 120 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಮಸಾರಿ, ಮಾರುತಿ ದೇವಸ್ಥಾನದ ಹತ್ತಿರ, ಗಂಗಾಪುರ ಪೇಟ, ವಿವೇಕಾನಂದ ನಗರ, ಗಾಂಧಿನಗರ, ಅಮರೇಶ್ವರ ನಗರ, ಜನತಾ ಕಾಲೋನಿ, ಅಕ್ಕಮಹಾದೇವಿ ದೇವಸ್ಥಾನದ ಹತ್ತಿರ, ಟ್ಯಾಗೋರ ರಸ್ತೆ, ಸರ್ವೋದಯ ಕಾಲೋನಿ, ಹುಡ್ಕೋ ಕಾಲೋನಿ, ಹಾತಲಗೇರಿ ನಾಕಾ, ಆರ.ಕೆ.ನಗರ, ಕಳಸಾಪುರ ರಸ್ತೆ, ಜಿಮ್ಸ್ , ಭುಳ್ಳಾ ಗಲ್ಲಿ, ಎಲ್.ಆಯ್.ಸಿ. ಕಚೇರಿ ಹತ್ತಿರ,

ಗದಗ ತಾಲೂಕಿನ ಲಕ್ಕುಂಡಿ, ಹುಲಕೋಟಿ, ನೀಲಗುಂದ, ಯಲಿಶಿರೂರ, ಹಾಳಕೇರಿ, ಕುರ್ತಕೋಟಿ, ಚಿಕ್ಕ ಹಂದಿಗೋಳ, ಮುಳಗುಂದ, ಕಣಗಿನಹಾಳ, ಮಲ್ಲಸಮುದ್ರ, ಸಂಭಾಪುರ,

ಮುಂಡರಗಿ ಪಟ್ಟಣದ ಮಾಬುಸಾಬನಿ ನಗರ, ಮುಂಡರಗಿ ತಾಲೂಕಿನ ಬರದೂರ, ಕದಾಂಪುರ, ಶೀರನಹಳ್ಳಿ,

ನರಗುಂದ ಪಟ್ಟಣದ ಅಧ್ಯಾಪಕ ನಗರ,

ರೋಣ ಪಟ್ಟಣದ ತಳವಾರ ಓಣಿ, ಶಿವಪೇಟ, ಬದಾಮಿ ರಸ್ತೆ, ಗುಲಗುಂಜಿಮಠ,

ರೋಣ ತಾಲೂಕಿನ ಇಟಗಿ, ಅಬ್ಬಿಗೇರಿ, ನಿಡಗುಂದಿ, ಮುಶಿಗೇರಿ, ಸೂಡಿ, ಮಲ್ಲಾಪುರ, ಗಜೇಂದ್ರಗಡ ಪಟ್ಟಣದ ಬಸವನಗರ,

ಶಿರಹಟ್ಟಿ ಪಟ್ಟಣದ ಈಶ್ವರ ನಗರ, ತಾಲೂಕಿನ ಬಾಳೆಹೊಸೂರ, ಬನ್ನಿಕೊಪ್ಪ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!