ಶಾಸಕರೇ ವೈದ್ಯರಾಗಿ ಸೇವೆ ಮಾಡಿದರೆ? ಈ ಸುದ್ದಿ ಓದಿ ಮೆಚ್ಚುಗೆಯ ಮಾತು ನಿಮ್ಮಿಂದಲೂ ಬರುತ್ತದೆ!

0
Spread the love

ವಿಜಯಸಾಕ್ಷಿ ಸುದ್ದಿ, ತುಮಕೂರು

Advertisement

ಇಡೀ ರಾಜ್ಯವೂ ಸೇರಿದಂತೆ ದೇಶವನ್ನು ಕೊರೊನಾ ನಲುಗಿಸುತ್ತಿದೆ. ಹೀಗಾಗಿ ಜನರ ಬದುಕು ಬೀದಿಗೆ ಬಂದು ನಿಂತಿದೆ. ಜನರ ಕಣ್ಣೀರು ಒರೆಸಲು ಹಲವರು ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇಲ್ಲಿ ಶಾಸಕರೇ ವೈದ್ಯರಾಗಿ ಜನರ ಸೇವೆ ಮಾಡುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಸ್ವತಃ ಶಾಸಕರೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸುಮಾರು 1,300 ಕೊರೊನಾ ರೋಗಿಗಳು ಈ ಕ್ಷತ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳನ್ನು ಮಾತನಾಡಿಸಿ, ಅವರ ನೋವಿಗೆ ಸ್ಪಂದಿಸುತ್ತ ಶಾಸಕರು ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರೇ ಈ ಮಹತ್ತರ ಕೆಲಸ ಮಾಡುತ್ತಿದ್ದಾರೆ.

ವೈದ್ಯರಾಗಿರುವ ಶಾಸಕ ಡಾ. ರಂಗನಾಥ್ ಅವರು ಸದ್ಯ ಜನರ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದಾರೆ. ಶಾಸಕರು ಪ್ರತಿದಿನ ಎರಡು ಬಾರಿ ಎಲ್ಲ ರೋಗಿಗಳನ್ನು ಕಂಡು ಮಾತನಾಡಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಅಲ್ಲದೇ, ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಬೆಡ್ ಕೊಡಿಸುತ್ತಿದ್ದಾರೆ. ತುಮಕೂರು ಹಾಗೂ ಬೆಂಗಳೂರಿಗೆ ಹಲವು ರೋಗಿಗಳನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಕೂಡ ಮಾಡಿದ್ದಾರೆ. ಇನ್ನುಳಿದ ರೋಗಿಗಳಿಗೆ ಅವರೇ ಸ್ವಕಃ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಶಾಸಕರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here