ಸ್ವಾತಂತ್ರ್ಯ ಹೋರಾಟದ ಕುರಿತು ತನಿಖೆಯಾಗಲಿ; ಕೇಂದ್ರ ಸಚಿವ ನಾರಾಯಣಸ್ವಾಮಿ

0
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ

Advertisement

ಪದೇ ಪದೇ ಕಾಂಗ್ರೆಸ್ ನಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂತು ಎನ್ನುತ್ತಿದ್ದಾರೆ.‌ ಯಾರ್ಯಾರು ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದ್ದರು ಎಂಬುದು ತನಿಖೆ ಆಗಬೇಕಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಹಾವೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊನ್ನೆ ಒಬ್ಬರು ಕಾಂಗ್ರೆಸ್ ನವರೇ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಎಂದು ಹೇಳ್ತಿದ್ರು,

ದೇಶಕ್ಕೆ ಸ್ವಾತಂತ್ರ್ಯ ಬರಲು ಕೇವಲ ಹಿಂದುಗಳು, ಅಲ್ಪಸಂಖ್ಯಾತರು ಮಾತ್ರ ಹೋರಾಟ ಮಾಡಲಿಲ್ಲ. ಜಾತಿಗೂ ಮೀರಿ ಒಗ್ಗಟ್ಟಿನಿಂದ ಹೋರಾಟ ಮಾಡಿದ್ದರಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಎ. ನಾರಾಯಣಸ್ವಾಮಿ ಟಾಂಗ್ ನೀಡಿದರು.

ಡಾಕ್ಟರ್ಸ್, ನರ್ಸ್ ಸೇರಿ ಎಲ್ಲ ಕೋವಿಡ್ ವಾರಿಯರ್ಸ್ ಗಳನ್ನು ಭೇಟಿ ಮಾಡಿದ್ದೆ. ಆದರೆ ಹಾವೇರಿಗೆ ಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪನವರ ಸ್ಮಾರಕಕ್ಕೆ ಭೇಟಿ ನೀಡಿದ್ದು, ನನಗೆ ವಿಶೇಷ ಅನುಭವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಭಗವಂತ್ ಖೂಬಾ ಬೆಂಬಲಿಗರಿಂದ ಬಂದೂಕು ಪ್ರದರ್ಶನ ಪ್ರಕರಣದಲ್ಲಿ ಸಚಿವರ ಬೆಂಬಲಿಗರು ಮಾಡಿದ ತಪ್ಪಿಗೆ ಪಿಎಸ್‌ಐ, ಕಾನ್ಸಟೆಬಲ್ ಗೆ ಅಮಾನತು ಶಿಕ್ಷೆ ಯಾಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ
ನಾರಾಯಣಸ್ವಾಮಿ, ನಿಮ್ಮ ಪ್ರಶ್ನೆ ಸರಿಯಿದೆ.

ಆ ಘಟನೆ ಬಗ್ಗೆ ನನಗೆ ಅರಿವಿಲ್ಲ. ಸಮರ್ಥನೆ ಮಾಡುವ ರಾಜಕಾರಣಿಯೂ ನಾನಲ್ಲ. ನನಗೆ ನನ್ನದೇ ಆದ ಬದ್ಧತೆ ಇದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here